Friday, September 18, 2026
spot_img
More
    spot_img
    HomeLatest newsಕಣ್ಣಿಗೆ ಖಾರದಪುಡಿ ಎರಚಿ ಚಿನ್ನ ಕದಿಯುವ ಮಹಿಳೆ ಯತ್ನ ವಿಫಲ: 15 ಸೆಕೆಂಡ್‌ನಲ್ಲಿ 17 ಬಾರಿ...

    ಕಣ್ಣಿಗೆ ಖಾರದಪುಡಿ ಎರಚಿ ಚಿನ್ನ ಕದಿಯುವ ಮಹಿಳೆ ಯತ್ನ ವಿಫಲ: 15 ಸೆಕೆಂಡ್‌ನಲ್ಲಿ 17 ಬಾರಿ ಕಪಾಳಕ್ಕೆ ಬಾರಿಸಿದ ಮಾಲೀಕ; ವಿಡಿಯೊ

    ಅಹ್ಮದಾಬಾದ್:‌ ಸಣ್ಣ ಚಿನ್ನದ ಅಂಗಡಿಗಳಲ್ಲಿ ವ್ಯಾಪಾರಿಗಳು ಕಡಿಮೆ ಸಂಖ್ಯೆಯಲ್ಲಿ ಇರುತ್ತಾರೆ, ಹೀಗಾಗಿ ಸುಲಭವಾಗಿ ಯಾಮಾರಿಸಬಹುದು ಎಂದು ಕಳ್ಳತನಕ್ಕೆ ಮುಂದಾಗುವ ಕಳ್ಳರು ನಾನಾ ರೀತಿಯ ಉಪಾಯಗಳನ್ನು ಮಾಡಿ ದರೋಡೆಗೆ ಯತ್ನ ಮಾಡುತ್ತಿರುತ್ತಾರೆ.

    Advertisement

    ಅದೇ ರೀತಿ ಗುಜರಾತ್‌ನ ರಾಜಧಾನಿ ಅಹ್ಮದಾಬಾದ್‌ನಲ್ಲಿ ಕಳ್ಳಿಯೊಬ್ಬಳು ತನ್ನ ಕೈಚಳಕ ತೋರಿಸಲು ಹೋಗಿ ಮಾಲೀಕನಿಗೆ ಸಿಕ್ಕಿಬಿದ್ದಿದ್ದಾಳೆ. ಅಹ್ಮದಾಬಾದ್‌ನ ರಣೀಪ್‌ ಪ್ರದೇಶದಲ್ಲಿ ನವೆಂಬರ್‌ 3ರ ಮಧ್ಯಾಹ್ನ 12.30ರ ಸಮಯಕ್ಕೆ ಮಹಿಳೆಯೊಬ್ಬರು ಚಿನ್ನ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದಿದ್ದಾಳೆ.

    ಈ ಸಮಯದಲ್ಲಿ ಮಾಲೀಕ ಒಬ್ಬನೇ ಇರುವುದನ್ನು ಕಂಡು ಆತನ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನ ದೋಚುವ ಸಂಚು ಮಾಡಿದ್ದಾಳೆ. ಆದರೆ ಮಾಲೀಕನಿಗೆ ಖಾರದಪುಡಿ ತಾಕಿಲ್ಲ. ಕೂಡಲೇ ಎಚ್ಚೆತ್ತ ಮಾಲೀಕ ಆಕೆಯನ್ನು ಹಿಡಿದು ಅಂಗಡಿಯಲ್ಲೇ ಸತತವಾಗಿ ಕಪಾಳಮೋಕ್ಷ ಮಾಡಿದ್ದಾನೆ. 15 ಸೆಕೆಂಡುಗಳಲ್ಲಿ 17 ಬಾರಿ ಆಕೆಯ ಕೆನ್ನೆಗೆ ಬಾರಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾನೆ.

    ಇಷ್ಟು ಘಟನೆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್‌ ಆಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading