Friday, September 18, 2026
spot_img
More
    spot_img
    HomeLatest newsಜಾತಿಗಣತಿ ಎಫೆಕ್ಟ್‌: ಸರ್ಕಾರಿ ಶಾಲೆಗಳಲ್ಲಿ ಪ್ರತಿದಿನವೂ ಸ್ಪೆಷಲ್ ಕ್ಲಾಸ್

    ಜಾತಿಗಣತಿ ಎಫೆಕ್ಟ್‌: ಸರ್ಕಾರಿ ಶಾಲೆಗಳಲ್ಲಿ ಪ್ರತಿದಿನವೂ ಸ್ಪೆಷಲ್ ಕ್ಲಾಸ್

    ಜಾತಿಗಣತಿ ಅಥವ ಕರ್ನಾಟಕ ಸರ್ಕಾರ ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ಪ್ರತಿದಿನವೂ ಸ್ಪೆಷಲ್ ಕ್ಲಾಸ್ ನಡೆಸಲಾಗುತ್ತದೆ. ಈ ಕುರಿತು ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಜ್ಞಾಪನಾ ಪತ್ರವನ್ನು ಹೊರಡಿಸಿದೆ.

    Advertisement

    ಈ ಜ್ಞಾಪನಾ ಪತ್ರದಲ್ಲಿ ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕೊರತೆಯಾಗುವ ಶಾಲಾ ದಿನಗಳ ಬೋಧನಾ ಕಲಿಕೆ ಸರಿದೂಗಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

    2025-26ನೇ ಸಾಲಿನಲ್ಲಿ ಶಾಲೆಗಳಲ್ಲಿ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳನ್ನು ಒಳಗೊಂಡ ಶೈಕ್ಷಣಿಕ ಮಾರ್ಗಸೂಚಿ ನೀಡಲಾಗಿದೆ. ಸದರಿ ಮಾರ್ಗಸೂಚಿಯಲ್ಲಿ 2025-26ನೇ ಸಾಲಿನ ದಸರಾ ರಜೆ ಅವಧಿಯನ್ನು ದಿನಾಂಕ 22/09/2025 ರಿಂದ 07/10/2025ರ ವರೆಗೆ ನಿಗದಿಗೊಳಿಸಲಾಗಿತ್ತು.

    ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ದಸರಾ ರಜಾ ಅವಧಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಸದರಿ ಕಾರ್ಯ ದಸರಾ ರಜೆಯಲ್ಲಿ ಆರಂಭಗೊಂಡಿರುತ್ತದೆ.

    ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು ಅವರು ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ನೀಡಿದ ಮನವಿ ಪತ್ರ ದಿನಾಂಕ 06.10.2025ರಲ್ಲಿ ಈ ಸಮೀಕ್ಷೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಅವಶ್ಯಕತೆ ಇದ್ದು ಸಮೀಕ್ಷೆಯನ್ನು ಪೂರ್ಣಗೊಳಿಸಲು ಶಾಲೆಗಳಿಗೆ ಹೆಚ್ಚುವರಿ ದಸರಾ ರಜೆಗಳನ್ನು ನೀಡಿ ಸಮೀಕ್ಷೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿರುತ್ತಾರೆ ಹಾಗೂ ವಿದ್ಯಾರ್ಥಿಗಳಿಗೆ ಮುಂದೆ ವಿಶೇಷ ಬೋಧನಾ ಅವಧಿಗಳನ್ನು ನಡೆಸಲಾಗುವುದು ಎಂದಿರುತ್ತಾರೆ.

    ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇವರು ನಮೂದಿಸಿದ ಟಿಪ್ಪಣಿಯಲ್ಲಿ ಸದರಿ ಮನವಿ ಕುರಿತು ಮಾನ್ಯ ಮುಖ್ಯ ಮಂತ್ರಿಗಳು ನೀಡುವ ಸೂಚನೆಯಂತೆ ಕ್ರಮವಹಿಸಿ ಎಂದು ನಿರ್ದೇಶಿಸಿರುತ್ತಾರೆ. ಮುಖ್ಯಮಂತ್ರಿಗಳು ದಿನಾಂಕ 07.10.2025ರ ವರೆಗೆ ನಿಗದಿಯಾಗಿದ್ದ ದಸರಾ ರಜೆಯನ್ನು ದಿನಾಂಕ 18.10.2025ರ ವರೆಗೆ ವಿಸ್ತರಿಸಿ ಆದೇಶಿಸಿರುತ್ತಾರೆ.

    ಅದರಂತೆ ದಸರಾ ರಜೆಯನ್ನು ದಿನಾಂಕ 18.10.2025ರ ವರೆಗೆ ವಿಸ್ತರಿಸಿ ಆದೇಶಿಸಲಾಗಿದೆ. ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಈ ಅವಧಿಯಲ್ಲಿ ಕಳೆದುಕೊಳ್ಳುವ ಶಾಲಾ ದಿನಗಳು (ಕಾರ್ಯನಿರತ ದಿನಗಳು) 8,9,10,11,13 ರಿಂದ 18 ಆಗಿದ್ದು, ಒಟ್ಟಾರೆ 10 ಶಾಲಾ ದಿನಗಳ ಕೊರತೆಯಾಗಿದೆ. ಇದರಲ್ಲಿ 8 ಪೂರ್ಣದಿನ ಮತ್ತು 2 ಅರ್ಧದಿನಗಳಾಗಿರುತ್ತದೆ.

    ಹೇಗೆ ನಡೆಯಲಿದೆ ಸ್ಪೆಷಲ್ ಕ್ಲಾಸ್?: ಪ್ರೌಢ ಶಾಲೆಗಳಿಗೆ ಸಂಬಂಧಿಸಿದಂತೆ 8 ಪೂರ್ಣ ದಿನ & 2 ಅರ್ಧ ದಿನಗಳು. ಪ್ರತಿ ಅವಧಿಯ ಸಮಯ 45 ನಿಮಿಷಗಳು ಆಗಿದೆ. 8 Full days – 87-56 Periods, 2 half days Total – 25-10 Periods. 66 Periods ಕೊರತೆ.

    ಇದಕ್ಕೆ ಪರಿಹಾರವಾಗಿ ಕೊರತೆಯಾಗುವ ಕಲಿಕಾ ಅವಧಿಗಳನ್ನು ಸರಿದೂಗಿಸಲು ಹಾಗೂ ಕಲಿಕಾ ಕೊರತೆಯನ್ನು ಸರಿದೂಗಿಸಲು ಈ ಕೆಳಕಂಡ ಕ್ರಮಗಳನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕೈಗೊಳ್ಳಲು ತಿಳಿಸಿದೆ.

    • ದಿನಾಂಕ 07.11.2025 ರಿಂದ 24.01.2026 ರವರೆಗೆ ಒಟ್ಟು 66 ಕರ್ತವ್ಯದ ದಿನಗಳಂದು ಪ್ರತಿ ದಿನ ಹೆಚ್ಚುವರಿ ಅವಧಿಯನ್ನು ನಿರ್ವಹಿಸಿ ಕಲಿಕಾ ಅವಧಿಗಳನ್ನು ಸರಿದೂಗಿಸಿಕೊಳ್ಳುವುದು.
    • ಇದಕ್ಕಾಗಿ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ 8.9.10 ನೇ ತರಗತಿಗಳಿಗೆ ಈ ದಿನಗಳಲ್ಲಿ ಒಂದು ಹೆಚ್ಚುವರಿ ಅವಧಿಯನ್ನು ಶಾಲಾ ಪ್ರಾರಂಭದಲ್ಲಿ ಅಥವಾ ಶಾಲಾ ಅವಧಿ ನಂತರದಲ್ಲಿ ಆಯಾ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳುವುದು.
    • ಜನವರಿ 2026 ರಿಂದ ಮಾರ್ಚ್ 2026 (ಪರೀಕ್ಷೆವರೆಗೆ) ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವುದು. 10 ನೇ ತರಗತಿ (ಎಸ್.ಎಸ್.ಎಲ್.ಸಿ) ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆಗಾಗಿ ವಿಶೇಷ ಗಮನ ಹರಿಸಿ ಕ್ರಮವಹಿಸುವುದು.

    ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ 8 ಪೂರ್ಣ ದಿನ & 2 ಅರ್ಧ ದಿನಗಳು. ಪ್ರತಿ ಅವಧಿಯ ಸಮಯ 40 ನಿಮಿಷಗಳು ಆಗಿದೆ. 8 Full days – 88-64 Periods, 2 half days – 25-10 Periods. Total – 74 Periods ಕೊರತೆ.

    • ದಿನಾಂಕ 07.11.2025 ರಿಂದ 05.02.2026 ರವರೆಗೆ ಒಟ್ಟು 74 ಕರ್ತವ್ಯದ ದಿನಗಳಂದು ಪ್ರತಿ ದಿನ ಹೆಚ್ಚುವರಿ ಅವಧಿಯನ್ನು ನಿರ್ವಹಿಸಿ ಕಲಿಕಾ ಅವಧಿಗಳನ್ನು ಸರಿದೂಗಿಸಿಕೊಳ್ಳುವುದು.
    • ಇದಕ್ಕಾಗಿ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 7/8 ನೇ ತರಗತಿಗಳಿಗೆ ಈ ದಿನಗಳಲ್ಲಿ ಒಂದು ಹೆಚ್ಚುವರಿ ಅವಧಿಯನ್ನು ಶಾಲಾ ಪ್ರಾರಂಭದಲ್ಲಿ ಅಥವಾ ಶಾಲಾ ಅವಧಿ ನಂತರದಲ್ಲಿ ಆಯಾ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳುವುದು.
    • ಜನವರಿ 2026 ರಿಂದ ಮಾರ್ಚ್ 2026 (ಪರೀಕ್ಷೆವರೆಗೆ) ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವುದು.

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading