ನಿನ್ನೆ ಪ್ರಸಿದ್ಧ ಯಾತ್ರಾಸ್ಥಳ ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಟಿಟಿಡಿಗೆ ಭಾರೀ ಹಿನ್ನಡೆಯನ್ನುಂಟುಮಾಡಿದ್ದು, ಸದ್ಯ ಟಿಟಿಡಿ ಹಾಗೂ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹೀಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ಹರಿದಾಡುತ್ತಿದ್ದು, “ತಿರುಪತಿ ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತ 12 ವರ್ಷದ ಬಾಲಕನ ಶವ ಸಾಗಿಸಲು 20 ಸಾವಿರ ಹಣ ಕೇಳಿದ್ರು. ಹೀಗಾಗಿ ತಂದೆ ಹಣ ನೀಡಲಾಗದೇ ಬೈಕ್ನಲ್ಲಿ 90 ಕಿ.ಮೀ ತನ್ನ ಮಗನ ಶವವನ್ನು ಸಾಗಿಸಿದರು” ಎಂದು ಬರೆಯಲಾಗಿದೆ.
ತಿರುಪತಿ ಕಾಲ್ತುಳಿತ ಸಂಭವಿಸಿದ ಬೆನ್ನಲ್ಲೇ ಈ ವಿಡಿಯೊವನ್ನು ಕೆಲವರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದರ ಹಿಂದಿನ ಸತ್ಯಾಂಶ ಬೇರೆ. ಈ ವಿಡಿಯೊ ತಿರುಪತಿ ಸರ್ಕಾರಿ ಆಸ್ಪತ್ರೆಯದ್ದೇ. ಆದರೆ ಘಟನೆ ನಡೆದದ್ದು 2022ರ ಏಪ್ರಿಲ್ನಲ್ಲಿ. ಹೌದು, ಜೇಸವ ಎಂಬ 12 ವರ್ಷದ ಬಾಲಕನನ್ನು ಲಿವರ್ ಹಾಗೂ ಕಿಡ್ನಿ ಸಮಸ್ಯೆ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೇಸವ ಸಾವನ್ನಪ್ಪಿದ್ದ. ಈ ವೇಳೆ ಶವ ಸಾಗಿಸಲು ಹಣ ಕೇಳಿದ ಕಾರಣ ಬೈಕ್ನಲ್ಲಿ ಆತನ ತಂದೆ ಬೈಕ್ ಮೇಲೆ ಮಗನ ಶವವನ್ನು 90 ಕಿಲೋ ಮೀಟರ್ ಸಾಗಿಸಿ ತಮ್ಮ ಗ್ರಾಮ ತಲುಪಿದ್ದರು. ಈ ಕುರಿತ ಸುದ್ದಿಯನ್ನು ಹಲವು ವೆಬ್ತಾಣಗಳೂ ಸಹ ಪ್ರಕಟಿಸಿದ್ದವು.

ಹೀಗೆ ಹಳೆ ವಿಡಿಯೊವನ್ನು ಹಂಚಿಕೊಳ್ಳುತ್ತಿರುವುದು ಜನರಿಗೆ ತಪ್ಪು ಸಂದೇಶ ತಲುಪಿಸುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


