ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಯಶ್ ದಯಾಳ್ ವಿರುದ್ಧ ಯುವತಿಯೊಬ್ಬಳು ಲೈಂಗಿಕ ಕಿರುಕುಳದ ದೂರನ್ನು ದಾಖಲಿಸಿದ್ದಾಳೆ. ಈ ಕುರಿತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಸಹ ಪತ್ರ ಬರೆದು ನ್ಯಾಯ ಒದಗಿಸುವಂತೆ ಯುವತಿ ಮನವಿ ಮಾಡಿಕೊಂಡಿದ್ದಾಳೆ.
ಹೀಗಾಗಿ ಯಶ್ ದಯಾಳ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಯಾವುದೇ ಕ್ಷಣದಲ್ಲಿ ಬೇಕಾದರೂ ಸಹ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ. ಅಂದಹಾಗೆ ಯುವತಿ ದೂರಿನಲ್ಲಿ ತಾನು ಹಾಗೂ ಯಶ್ ದಯಾಳ್ ರಿಲೇಷನ್ಶಿಪ್ನಲ್ಲಿ ಐದು ವರ್ಷಗಳಿಂದ ಇದ್ದು, ಯಶ್ ದಯಾಳ್ ಆತನ ಮನೆಗೆ ತನ್ನನ್ನು ಪರಿಚಯಿಸಿ ಗಂಡನಂತೆ ವರ್ತಿಸಿದ್ದ, ಮದುವೆಯಾಗುವುದಾಗಿ ಭರವಸೆ ನೀಡಿದ್ದ ಹೀಗಾಗಿ ಆತನನ್ನು ನಂಬಿದೆ.
ಇದರಿಂದ ಆತನ ಜೊತೆ ಎಲ್ಲ ರೀತಿಯ ಸಂಬಂಧ ಬೆಳೆಸಿದೆ. ಆದರೆ ಆತ ಇದೇ ರೀತಿ ಇತರೆ ಯುವತಿಯರ ಜೊತೆ ಸಹ ಸಂಬಂಧ ಹೊಂದಿರುವುದು ನಂತರ ತಿಳಿದುಬಂತು. ಈಗ ಯಶ್ ದಯಾಳ್ ತನ್ನನ್ನು ವಿವಾಹವಾಗುವುದಿಲ್ಲ ಎಂದು ತಿಳಿದುಬಂದಿದ್ದು, ತನಗಾದ ಮೋಸಕ್ಕೆ ನ್ಯಾಯ ಕೊಡಿಸಬೇಕೆಂದು ದೂರು ನೀಡಿದ್ದಾಳೆ.
ಕೃಷಿ ಕನ್ನಡ ಎಐ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಡಿಗ್ರಿ ಬೇಡ ಸ್ಕಿಲ್ ಇದ್ದರೆ ಸಾಕು ಬೆಂಗಳೂರು ಸಂಸ್ಥೆಯಿಂದ ₹1 ಕೋಟಿ ಸಂಬಳದ ಜಾಬ್ ಆಫರ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


