ಉಳ್ಳಾಲ: ಚಕ್ರವರ್ತಿ ಸೂಲಿಬೆಲೆ ಧರ್ಮಗಳ ಕುರಿತು ಭಾಷಣ ಮಾಡುವಾಗ ಅನ್ಯ ಧರ್ಮದ ಹುಡುಗಿಯನ್ನು ಉಲ್ಲೇಖಿಸುವ ಮೂಲಕ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದ ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜ ಆದಿಕ್ಷೇತ್ರದವರೆಗೆ ನಡೆದ ‘ಕೊರಗಜ್ಜ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಮದುವೆಯಾಗಲು ಹುಡುಗಿ ಸಿಗದ ಹಿಂದೂ ಯುವಕರು ಅನ್ಯಧರ್ಮದ ಹುಡುಗಿಯರನ್ನು ಮದುವೆಯಾಗಿ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.
‘ಸ್ವತಂತ್ರ ಬಂದಾಗಿನಿಂದ ಮತಾಂತರ ಆಗ್ತಾ ಇದೆ ಅಂತ ಮಾತನಾಡುತ್ತಲೇ ಇದ್ದೇವೆ. ಮತಾಂತರ ಆಗ್ತಿದೆ ಅಂತ ಎಷ್ಟು ದಿನ ಬಡಿದಾಡುವುದು? ಘರ್ವಾಪ್ಸಿ ಮಾಡೋದು ಹೇಗೆ ಅಂತ ಪ್ರತಿ ಮನೆಗೂ ಕಲಿಸಿಕೊಡೋಣ. ಮತಾಂತರ ಆದವರನ್ನು ಕೊರಗಜ್ಜನ ಸನ್ನಿಧಿಗೆ ಕರೆದುಕೊಂಡು ಬಂದು ಶುದ್ಧಿ ಮಾಡಿ. ಯಾವುದ್ಯಾವುದೋ ರೀಲ್ ಮಾಡೋ ತರುಣರು ಮತಾಂತರ ಆದವರನ್ನು ವಾಪಸ್ ತರುವ ಕುರಿತು ರೀಲ್ ಮಾಡಿ. ಮನೆ ಮನೆಯಲ್ಲಿಯೂ ಘರ್ ವಾಪ್ಸಿಯ ಬಗ್ಗೆ ಚರ್ಚೆ ನಡೆಯಬೇಕಿದೆ. ಎಲ್ಲಿಯವರೆಗೂ ಲವ್ ಜಿಹಾದ್ ಬಗ್ಗೆ ಮಾತನಾಡೋಣ. ಸ್ವಲ್ಪ ಬದಲಾವಣೆ ತರಣ. ನಮ್ಮ ಗಂಡು ಮಕ್ಕಳಿಗೂ ಹೇಳಣ. ಎಷ್ಟು ದಿನ ಅಂತ ನಮ್ದೇ ಹೆಣ್ಣುಮಕ್ಕಳನ್ನು ನೋಡ್ತೀರ, ಹುಡುಗಿ ಸಿಗಲಿಲ್ಲ ಅಂತ ಎಷ್ಟು ಹೇಳ್ತಿರ. ಸ್ವಲ್ಪ ಬೇರೆಯವರನ್ನೂ ನೋಡ್ರಲ’ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


