ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಜಾತಿಗಣತಿ ಸಮೀಕ್ಷೆ ವರದಿ ಕುರಿತು ಇದೀಗ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ ಮಾಡಿದ್ದು, ಮತ್ತೊಮ್ಮೆ ಜಾತಿಗಣತಿ ಮಾಡುವಂತೆ ಸಲಹೆ ನೀಡಿದೆ.
ಈ ಕುರಿತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾತನಾಡಿದ್ದು, ಜಾತಿಗಣತಿ ಸಮೀಕ್ಷೆಯನ್ನು ಪುನಃ ಮಾಡುವಂತೆ ಸೂಚನೆ ನೀಡಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ʼಹೈಕಮಾಂಡ್ನವರು ನನಗೆ ಹೇಳಿದ್ದಾರೆ. ಕೆಲವು ದೂರುಗಳು ಬಂದಿವೆ. ಏಕೆಂದರೆ ಸಮೀಕ್ಷೆ ನಡೆದಿರುವುದು 2015ರಲ್ಲಿ. ಸಮೀಕ್ಷೆ ನಡೆದು ಈಗಾಗಲೇ 9-10 ವರ್ಷಗಳು ಕಳೆದಿವೆ. ಅದಕ್ಕೆ ಬಹಳ ಕಡಿಮೆ ಅವಧಿಯಲ್ಲಿ, 60 – 70 ದಿನಗಳಲ್ಲಿ ಹೊಸ ಸರ್ವೆ ಮಾಡುವಂತೆ ತಿಳಿಸಿದೆ. ಇದು ನನ್ನ ನಿರ್ಧಾರವಲ್ಲ, ಹೈಕಮಾಂಡ್ನ ನಿರ್ಧಾರ. ಹೈಕಮಾಂಡ್ ಹೇಳುವುದನ್ನು ಕೇಳುವುದು ನಮ್ಮ ಕರ್ತವ್ಯʼ ಎಂದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


