Monday, August 3, 2026
spot_img
More
    spot_img
    HomeLatest newsಹೊಸ ದಾಖಲೆ ಬರೆದ 'ಬಿಳಿ ಲೋಹ'; ಗರಿಷ್ಠ ಮಟ್ಟ ಸಮೀಪಿಸಿದ ಚಿನ್ನ ಪ್ರಸ್ತುತ ಗೋಲ್ಡ್‌ ರೇಟ್‌ ಎಷ್ಟಿದೆ?

    ಹೊಸ ದಾಖಲೆ ಬರೆದ ‘ಬಿಳಿ ಲೋಹ’; ಗರಿಷ್ಠ ಮಟ್ಟ ಸಮೀಪಿಸಿದ ಚಿನ್ನ ಪ್ರಸ್ತುತ ಗೋಲ್ಡ್‌ ರೇಟ್‌ ಎಷ್ಟಿದೆ?

    ಭಾರತದ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ (Silver Price) ವಿಪರೀತ ಏರಿಕೆ ಕಂಡಿದ್ದು, ಇತಿಹಾಸದಲ್ಲೇ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ! ಗುರುವಾರ, ಡಿಸೆಂಬರ್ 11ರಂದು ಬಿಳಿ ಲೋಹದ ದರ ಒಂದೇ ಸೆಷನ್‌ನಲ್ಲಿ ಬೃಹತ್ ಜಿಗಿತ ಕಂಡಿದೆ.

    Advertisement

    ಜಾಗತಿಕ ಮತ್ತು ಕೈಗಾರಿಕಾ ಬೇಡಿಕೆ ಹೆಚ್ಚಾದ ಕಾರಣ, ಭಾರತದಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 2 ಲಕ್ಷ ರೂಪಾಯಿಗಳ ಸಮೀಪಕ್ಕೆ ಬಂದು ನಿಂತಿದೆ! ನಿನ್ನೆ ₹199ಕ್ಕೆ ಏರಿದ್ದ ಬೆಳ್ಳಿ ಬೆಲೆ ಇಂದು ಮತ್ತೊಂದು ಹೆಜ್ಜೆ ಮುಂದೆ ಹೋಗಿ ₹201ಕ್ಕೆ ಮುಟ್ಟಿದೆ.

    ಏಕೆ ಈ ಏರಿಕೆ? ಅಮೆರಿಕಾದಲ್ಲಿ ಬಡ್ಡಿ ದರ ಕಡಿತದ ಸಾಧ್ಯತೆ ಡಾಲರ್ ಮೌಲ್ಯವನ್ನು ಹೆಚ್ಚಿಸಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ (Global Market) ಪ್ರತಿ ಔನ್ಸ್‌ಗೆ ಬೆಳ್ಳಿ ಬೆಲೆ $62.50 ತಲುಪಿದೆ.

    ಒಂದೆಡೆ ಬೆಳ್ಳಿ ಹೀಗೆ ದಾಖಲೆ ಬರೆಯುತ್ತಿದ್ದರೆ, ಚಿನ್ನದ ಬೆಲೆ (Gold Price) ಕೂಡ ಹೆಚ್ಚೂಕಡಿಮೆ ಸ್ಥಿರವಾಗಿದೆ. ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹1,19,450 ಇದ್ದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ₹1,30,031 ಆಗಿದೆ.

    ಬೆಂಗಳೂರಿನಲ್ಲಿ ಬೆಲೆ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ₹1,19,450 ಇದ್ದರೆ, 100 ಗ್ರಾಂ ಬೆಳ್ಳಿ ಬೆಲೆ ₹19,900 ಆಗಿದೆ (ತಮಿಳುನಾಡು, ಕೇರಳದಂತಹ ಕಡೆ ₹20,700 ಇದೆ).ಬೆಳ್ಳಿ ಖರೀದಿಸುವವರಿಗೆ ಇದು ತಲೆನೋವಾದರೆ, ಹೂಡಿಕೆದಾರರಿಗೆ ಇದು ಖುಷಿಯ ಸುದ್ದಿ!

    ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ

    24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,020 ರೂ

    22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,935 ರೂ

    18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,765 ರೂ

    ಬೆಳ್ಳಿ ಬೆಲೆ 1 ಗ್ರಾಂಗೆ: 199 ರೂ

    ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ

    ಬೆಂಗಳೂರು ₹1,19,350

    ಚೆನ್ನೈ ₹1,29,550

    ಮುಂಬೈ ₹1,19,350

    ಕೋಲ್ಕತ್ತಾ ₹1,19,350

    ದೆಹಲಿ ₹1,19,500

    ಕ್ಯಾನ್ಸರ್ ಅಪಾಯ ಹೆಚ್ಚಿಸುವ ಜೀನ್ ಹೊಂದಿದ್ದ ದಾನಿಯ ವೀರ್ಯದಿಂದ ಯುರೋಪ್‌ನಲ್ಲಿ 200 ಮಕ್ಕಳ ಜನನ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading