ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪ ಮಾಡಿ ಚಿನ್ನಯ್ಯ ನೀಡಿರುವ ದೂರಿನ ಆಧಾರದ ಮೇಲೆ ರಚಿತವಾಗಿರುವ ಎಸ್ಐಟಿ ಸದ್ಯ ತನ್ನ ತನಿಖೆಯನ್ನು ಮುಂದುವರಿಸಿದ್ದು, ತನಿಖೆ ಯಾವ ಹಂತದಲ್ಲಿದೆ ಹಾಗೂ ಏನೆಲ್ಲ ಸಿಕ್ಕಿದೆ ಎಂಬ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಆದರೆ ಚಿನ್ನಯ್ಯನನ್ನು ಈಗಾಗಲೇ ಜೈಲಿಗೆ ಕಳುಹಿಸಿರುವ ಎಸ್ಐಟಿ ಅಧಿಕಾರಿಗಳು ಸೌಜನ್ಯ ಮಾವ ವಿಠಲ ಗೌಡರನ್ನು ವಿಚಾರಣೆ ನಡೆಸಿದ್ದು, ಬಂಗ್ಲೆಗುಡ್ಡದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದೆ.
ಇನ್ನು ವಿಠಲ ಗೌಡ ಡಿ ಟಾಕ್ಸ್ ಎಂಬ ಯುಟ್ಯೂಬ್ ಚಾನೆಲ್ನಲ್ಲಿ ಸ್ಥಳ ಮಹಜರು ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಬಂಗ್ಲೆಗುಡ್ಡದಲ್ಲಿ ಅಸ್ತಿಪಂಜರಗಳ ರಾಶಿಯೇ ಸಿಕ್ಕಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮೊದಲ ಸ್ಥಳದಲ್ಲಿ ಮೂರು ಅಸ್ತಿಪಂಜರಗಳು ಸಿಕ್ಕವು ಎಂದ ವಿಠಲ ಗೌಡ ಎರಡನೇ ಸ್ಥಳದಲ್ಲಿ ಹೆಣಗಳ ರಾಶಿಯೇ ಇತ್ತು, ಐದು ಅಸ್ತಿಪಂಜರಗಳು ಕಣ್ಣಿಗೆ ಬಿದ್ದವು, ಅಲ್ಲದೇ ಅಲ್ಲಿ ಮಗುವಿನ ಎಲುಬು ಸಹ ಇತ್ತು, ಪಕ್ಕದಲ್ಲಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಸಹ ಬಿದ್ದಿದ್ದವು ಎಂಬ ಆತಂಕಕಾರಿ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದು, ಅದರ ಬಗ್ಗೆ ಎಸ್ಐಟಿ ಅಧಿಕಾರಿಗಳೇ ತೀರ್ಮಾನ ಕೈಗೊಳ್ಳಬೇಕು, ಅವರು ಯಾರೋ ಹೇಳಿದರು ಎಂದು ನಾವು ಬೆಂಗಳೂರಿನಲ್ಲಿ ಕುಳಿತು ತೀರ್ಮಾನ ಮಾಡಲು ಆಗುವುದಿಲ್ಲ ಎಂದರು. ದೂರು ನೀಡಿದವರು ಅದಕ್ಕೆ ಬೇಕಾದ ದಾಖಲೆ ಕೊಟ್ಟರೆ ಎಸ್ಐಟಿ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಒಂದುವೇಳೆ ಸರ್ಕಾರದ ಅನುಮತಿ ಬೇಕೆಂದರೆ ಮಾತ್ರ ತಿಳಿಸುತ್ತಾರೆ. ಸದ್ಯಕ್ಕೆ ಆ ರೀತಿಯ ಯಾವುದೇ ಅನುಮತಿ ಕೇಳಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
ಅಲ್ಲದೇ ಮಹೇಶ್ ಶೆಟ್ಟಿ ತಿಮರೋಡಿ ಧರ್ಮಸ್ಥಳದ ವಸತಿ ಗೃಹಗಳಲ್ಲಿ ಅಸಹಜ ಸಾವುಗಳು ಸಂಭವಿಸಿದ್ದು, ಇವುಗಳನ್ನು ಕೊಲೆ ಎಂದು ಪರಿಗಣಿಸಿ ತನಿಖೆ ನಡೆಸಬೇಕು ಎಂದು ನೀಡಿರುವ ದೂರಿನ ಬಗ್ಗೆಯೂ ಮಾತನಾಡಿದ ಪರಮೇಶ್ವರ್ ಅದೂ ಸಹ ಎಸ್ಐಟಿ ಅಧಿಕಾರಿಗಳಿಗೆ ಬಿಟ್ಟ ವಿಚಾರ ಏನೇ ಇದ್ದರೂ ಅವರೇ ತೀರ್ಮಾನ ಮಾಡುತ್ತಾರೆ, ಎಸ್ಐಟಿ ಅಧಿಕಾರಿಗಳಿಗೆ ನೀಡಿರುವ ದೂರು ಅದು ಎಂದು ಹೇಳಿದರು.
ಕಾರಿನಲ್ಲೇ ಹೃದಯಾಘಾತಕ್ಕೆ ತುತ್ತಾದ ಮಿಲಿಟರಿ ವೈದ್ಯಾಧಿಕಾರಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


