ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನವಾಗಿದ್ದು, 3 ಲಕ್ಷ ನಗದು ಕಳುವಾಗಿರುವ ಘಟನೆ ನಡೆದಿದೆ.
ನಗರದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಅಪಾರ್ಟ್ಮೆಂಟ್ನಲ್ಲಿರುವ ವಿಜಯಲಕ್ಷ್ಮಿ ಫ್ಲಾಟ್ನಲ್ಲಿ 3 ಲಕ್ಷ ರೂ ಕಳುವಾಗಿದ್ದು, ಮ್ಯಾನೇಜರ್ ನಾಗರಾಜ್ ದೂರು ದಾಖಲಿಸಿದ್ದಾರೆ.
ಇನ್ನು ನಾಗರಾಜ್ ಮನೆ ಕೆಲಸದವರ ಮೇಲೆ ಅನುಮಾನ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಜಯಲಕ್ಷ್ಮಿ ಮೈಸೂರಿಗೆ ತೆರಳಿದ್ದ ಸಂದರ್ಭದಲ್ಲಿ ಮನೆ ಕೆಲಸದವರು ಮ್ಯಾನೇಜರ್ ಬಳಿ ಹಣ ಕೇಳಿದ್ದರಂತೆ. ಈ ವೇಳೆ ಕೊಡಬೇಕಿದ್ದ ಹಣವನ್ನು ನೀಡಿ ಉಳಿದ ಹಣವನ್ನು ಕಬೋರ್ಡ್ನಲ್ಲಿಯೇ ಇಟ್ಟಿದ್ದರಂತೆ ಮ್ಯಾನೇಜರ್ ನಾಗರಾಜ್. ಬಳಿಕ ಮನೆಗೆ ಬೀಗ ಹಾಕಿ ಬೀಗದ ಕೈಯನ್ನು ವಿಜಯಲಕ್ಷ್ಮಿ ಅವರ ತಾಯಿಯ ಬಳಿ ಕೊಟ್ಟು ತೆರಳಿದ್ದಂತೆ.
ವಿಜಯಲಕ್ಷ್ಮಿ ಸೆಪ್ಟೆಂಬರ್ 7ರಂದು ಮೈಸೂರಿನಿಂದ ವಾಪಸ್ ಆಗಿದ್ದು, ಮಾರನೇ ದಿನ ಹಣ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ದಸರಾಗೂ ಖಾಸಗಿ ದರ್ಬಾರಿಗೂ ಯಾವುದೇ ಸಂಬಂಧವಿಲ್ಲ ಅದು ಮನೆತನಕ್ಕೆ ಸೇರಿದ ಪೂಜೆ: ಯದುವೀರ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


