Tuesday, August 4, 2026
spot_img
More
    spot_img
    HomeLatest newsಚಿನ್ನ-ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆ: ಇಂದಿನ ದರ ಎಷ್ಟಿದೆ ಗೊತ್ತಾ?

    ಚಿನ್ನ-ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆ: ಇಂದಿನ ದರ ಎಷ್ಟಿದೆ ಗೊತ್ತಾ?

    ಭಾರತದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮತ್ತೆ ಇಳಿಕೆಯ ಹಾದಿ ಹಿಡಿದಿದ್ದು, ನಿನ್ನೆಯ (ಸೋಮವಾರ) ಅನಿರೀಕ್ಷಿತ ಏರಿಕೆಯ ಬಳಿಕ ಇಂದು ‘ಕೂಲ್ ಆಫ್’ ಆಗಿದೆ. ಕಳೆದ ವಾರದ ವೀಕೆಂಡ್‌ನಲ್ಲಿ ಇಳಿಕೆಯಾಗಿದ್ದ ಬೆಲೆಗಳು, ಸೋಮವಾರ ದಿಢೀರ್ ಏರಿಕೆಯಾಗಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದವು. ಆದರೆ ಮಂಗಳವಾರ ಮತ್ತೆ ದರಗಳು ತಗ್ಗಿದೆ.

    Advertisement

    ಸೋಮವಾರ ₹75 ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ (Gold Rate) ಮಂಗಳವಾರ ₹80 ಇಳಿಕೆ ಕಂಡಿದೆ. ಇದೇ ರೀತಿ, ನಿನ್ನೆ ₹3 ಹೆಚ್ಚಳವಾಗಿದ್ದ ಬೆಳ್ಳಿ ಬೆಲೆ ಇಂದು ₹3 ತಗ್ಗಿದೆ.ಇಂದು (ಮಂಗಳವಾರ) ಮಾರುಕಟ್ಟೆಯಲ್ಲಿ, 10 ಗ್ರಾಂ 22 ಕ್ಯಾರಟ್ ಚಿನ್ನದ (ಆಭರಣ ಚಿನ್ನ) ಬೆಲೆಯು ₹1,22,700 ರಷ್ಟಿದ್ದು, ಇದು ₹1,23,000 ಗಡಿಯೊಳಗೆ ಉಳಿದಿದೆ. ಅಂತೆಯೇ, 10 ಗ್ರಾಂ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,33,860 ಆಗಿದ್ದು, ಇದು ₹1,34,000 ಗಡಿಯೊಳಗೆ ಇದೆ. ಇನ್ನು ಬೆಳ್ಳಿ ದರವನ್ನು ಗಮನಿಸಿದರೆ, 100 ಗ್ರಾಂ ಬೆಳ್ಳಿಯ ಬೆಲೆ ₹19,900 ರಷ್ಟಿದ್ದು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಇದೇ ದರಗಳು ಚಾಲ್ತಿಯಲ್ಲಿವೆ.

    ಭಾರತದಲ್ಲಿ ಇಂದಿನ (ಡಿಸೆಂಬರ್ 16) ಚಿನ್ನ ಮತ್ತು ಬೆಳ್ಳಿ ದರಗಳು

    ಚಿನ್ನ24 ಕ್ಯಾರಟ್ (ಅಪರಂಜಿ)1 ಗ್ರಾಂ13,386

    ಚಿನ್ನ22 ಕ್ಯಾರಟ್ (ಆಭರಣ)1 ಗ್ರಾಂ12,270a

    ಚಿನ್ನ18 ಕ್ಯಾರಟ್1 ಗ್ರಾಂ10,039

    ಬೆಳ್ಳಿ-1 ಗ್ರಾಂ199

    ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

    ಬೆಂಗಳೂರು ₹1,33,860

    ನಾಗ್ಪುರ ₹1,33,860

    ಮುಂಬೈ ₹1,33,860

    ಚೆನ್ನೈ ₹1,34,730

    ಕೋಲ್ಕತ್ತಾ ₹1,33,860

    ಪಾಟ್ನಾ ₹1,33,910

    ಸೂರತ್‌ ₹1,33,910

    ಚಂಡೀಗಢ ₹1,34,010

    ಲಕ್ನೋ ₹1,34,010

    2025 ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಆರೋಗ್ಯ ಲಕ್ಷಣಗಳು!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading