Monday, August 10, 2026
spot_img
More
    spot_img
    HomeLatest newsSBI ಗ್ರಾಹಕರಿಗೆ ಶುಭ ಸುದ್ದಿ;ಬಡ್ಡಿದರ ಶೇ.0.25 ಇಳಿಸಿದ ಎಸ್‌ಬಿಐ

    SBI ಗ್ರಾಹಕರಿಗೆ ಶುಭ ಸುದ್ದಿ;ಬಡ್ಡಿದರ ಶೇ.0.25 ಇಳಿಸಿದ ಎಸ್‌ಬಿಐ

    ಸಾರ್ವಜನಿಕ ವಲಯದ ಬ್ಯಾಂಕ್ SBI ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಇಂದಿನಿಂದ ರೆಪೊ ದರವನ್ನು ಶೇ.6.50 ರಿಂದ ಶೇ.6.25ಕ್ಕೆ ಇಳಿಸುವುದಾಗಿ ಘೋಷಿಸಿದೆ. ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ಚಿಲ್ಲರೆ ಸಾಲಗಳ ಮೇಲಿನ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಲಾಗಿದೆ ಎಂದು SBI ಹೇಳಿದೆ. ಹೊಸ ಸಾಲಗಾರರಿಗೆ ಇದು ಉತ್ತಮ ಅವಕಾಶ ಎಂದು ಹೇಳಲಾಗುತ್ತಿದೆ. MCLR ಮತ್ತು BPLR ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿದುಬಂದಿದೆ.ಇತ್ತೀಚೆಗೆ ರೆಪೊ ದರವನ್ನು 0.25% (25 ಬೇಸಿಸ್ ಪಾಯಿಂಟ್‌ಗಳು) ಕಡಿತಗೊಳಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ಬಡ್ಡಿದರಗಳು ಫೆಬ್ರವರಿ 15, 2025 ರಿಂದ ಅನ್ವಯವಾಗುತ್ತವೆ.ಇತ್ತೀಚೆಗೆ ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್‌ ಬ್ಯಾಂಕ್, ಯೂನಿಯನ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‌ಗಳು ರೆಪೊ ದರಕ್ಕೆ ಸಂಬಂಧಿಸಿದ ಸಾಲ ದರಗಳನ್ನು ಕಡಿತಗೊಳಿಸಿದವು. ಎಸ್.ಬಿ.ಐ. ಕೂಡ ಗೃಹ, ವಾಹನ, ವೈಯಕ್ತಿಕ, ವಾಣಿಜ್ಯ ಸಾಲದ ಮೇಲಿನ ಬಡ್ಡಿ ದರಗಳನ್ನು ಕಡಿಮೆ ಮಾಡಿದೆ. ಗ್ರಾಹಕರ ಮಾಸಿಕ ಇಎಂಐ(EMI) ಮೊತ್ತದಲ್ಲಿ ಇಳಿಕೆಯಾಗಲಿದೆ.

    Advertisement

    ಎಸ್‌ಬಿಐ ಬಡ್ಡಿ ದರ ಏಕೆ ತಗ್ಗಿಸಿದೆ?

    ಎಸ್‌ಬಿಐ(SBI) ತನ್ನ ಬಡ್ಡಿ ದರವನ್ನು ಇಳಿಸುವುದಕ್ಕೆ ಪ್ರಮುಖ ಕಾರಣವೇನೆಂದರೆ, RBI ಕಳೆದ ವಾರ ಎಂಪಿಸಿ ಸಭೆಯಲ್ಲಿ ರೆಪೊ ದರವನ್ನು 0.25% ರಷ್ಟು ಕಡಿತಗೊಳಿಸಿದ್ದು. ಇದರ ಪರಿಣಾಮವಾಗಿ, ಎಸ್‌ಬಿಐ ತನ್ನ EBLR (ಬಾಹ್ಯ ಮಾನದಂಡ ಸಾಲ ದರ) ಮತ್ತು RLLR (Repo Linked Lending Rate) ಅನ್ನು ಕಡಿತಗೊಳಿಸಿದೆ.EBLR ಹಿಂದಿನ ದರ ಶೇ.9.15 + CRP + BSP ಇತ್ತು, ಆದರೆ ಇದೀಗ ಹೊಸ ದರ ಶೇ.8.90 + CRP + BSP ಆಗಿದ್ದು, EBLR 0.25% ಇಳಿದಿದೆ.RLLR ಹಿಂದಿನ ದರ ಶೇ.8.75 + CRP ಇತ್ತು, ಆದರೆ ಹೊಸ ದರ ಶೇ.8.50 + CRP ಆಗಿದ್ದು, RLLR ಕೂಡ 0.25% ಇಳಿದಿದೆ.CRP ಎಂದರೆ ಕ್ರೆಡಿಟ್ ರಿಸ್ಕ್ ಪ್ರೀಮಿಯಂ, BSP ಎಂದರೆ ಬಿಜಿನೆಸ್ ಸ್ಟ್ರಾಟರ್ಜಿ ಪ್ರೀಮಿಯಂ. ಇವುಗಳು ಸಾಲಗಾರರ ಅಪಾಯ ಮಟ್ಟ ಮತ್ತು ಬ್ಯಾಂಕಿನ ವ್ಯವಹಾರ ತಂತ್ರವನ್ನು ಅವಲಂಬಿಸಿ ಬದಲಾಗುತ್ತವೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading