ಆಳಂದ: ಸರ್ಕಾರಿ ಕಚೇರಿಗಳಲ್ಲಿ ಒಂದಿಲ್ಲೊಂದು ಎಡವಟ್ಟು ನಡೆಯುತ್ತವೆ ಎಂಬುದಕ್ಕೆ ಜೀವಂತ ಇದ್ದವಳ ಹೆಸರಲ್ಲಿ ಮರಣ ಪ್ರಮಾಣಪತ್ರ ನೀಡಿರುವುದೇ ಸಾಕ್ಷಿ.
ತಾಲೂಕಿನ ಬೊಮ್ಮನಳ್ಳಿ ಗ್ರಾಮದ ಪರಮೇಶ್ವರ ಜಿರೋಳ್ಳಿ(ತಳವಾರ) ಅವರ ಮಗಳು ಪುಷ್ಪಾವತಿ 2024ರ ನ.21ರಂದು ನೀರು ತರಲು ಹೋಗಿದ್ದಾಗ ಕಾಲು ಜಾರಿ ಬಾವಿಯಲ್ಲಿ ಕಚೇರಿ ಪ್ರಮಾದ ಬಿದ್ದು ಮೃತಪಟ್ಟಿದ್ದಳು. ಆಕೆ ಮರಣ ಪ್ರಮಾಣಪತ್ರಕ್ಕಾಗಿ 2025ರ ಫೆ.28ರಂದು ಆಕೆಯ ತಂದೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಸ್ವೀಕರಿಸಿದ ಗ್ರಾಮಾಧಿಕಾರಿ ಜಗನ್ನಾಥ ಸಿಂದೆ, ಮೃತಳ ಮನೆಗೆ ಭೇಟಿ ನೀಡಿ ಪಂಚನಾಮೆ ನಡೆಸಿದ ಬಳಿಕ ಮರಣ ಪ್ರಮಾಣಪತ್ರ ವಿತರಿಸಬೇಕಿತ್ತು. ಆದರೆ, ಮೃತಳ ತಂದೆ ಕೊಟ್ಟ ಅರ್ಜಿ ಆಧಾರದಲ್ಲಿ ಕಚೇರಿಯಲ್ಲೇ ವರದಿ ಸಿದ್ಧಪಡಿಸಿ ಪ್ರಮಾಣಪತ್ರ ವಿತರಿಸಿದ್ದಾರೆ. ಇಲ್ಲೇ ಎಡವಟ್ಟಾಗಿದ್ದು, ಮೃತಳ ತಂದೆ ಪುಷ್ಪಾವತಿ ಬದಲು ಆಕೆಯ ಅಕ್ಕ ಪವಿತ್ರಾ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆ ಹೆಸರಿನಲ್ಲೇ ಮರಣ ಪ್ರಮಾಣಪತ್ರ ವಿತರಿಸಿರುವುದು ಪ್ರಮಾದಕ್ಕೆ ಕಾರಣವಾಗಿದೆ.
ಉದ್ಯಮಿಗಳನ್ನು ಆಂಧ್ರಕ್ಕೆ ಕರೆದ ನಾರಾ ಲೋಕೇಶ್ಗೆ ಎಂಬಿ ಪಾಟೀಲ್ ತಿರುಗೇಟು
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


