ಬೆಂಗಳೂರು ನಗರದ ಟ್ರಾಫಿಕ್ ನಡುವೆ ರಸ್ತೆ ದಾಟುವುದೇ ಹರಸಾಹಸ. ಸಿಗ್ನಲ್ ಪಾಲಿಸದೇ ರಸ್ತೆ ದಾಟಲು ಹೋಗಿ ಪ್ರಾಣ ಕಳೆದುಕೊಂಡವರ ಹಲವಾರು ಉದಾಹರಣೆಗಳಿವೆ. ಹೀಗಿರುವಾಗ ನಡು ರಸ್ತೆಯಲ್ಲಿಯೇ ವ್ಯಕ್ತಿಯೋರ್ವ ಚೇರ್ ಹಾಕಿಕೊಂಡು ಕುಳಿತು ಟೀ ಕುಡಿಯುತ್ತಾ ರೀಲ್ ಮಾಡಿದ್ದಾನೆ.
ಈ ರೀಲ್ ವೈರಲ್ ಆಗಿದ್ದು, ಅನೇಕರು ಈತನ ನಡೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಡಿಯೊ ಹಂಚಿಕೊಂಡು ಬೆಂಗಳೂರು ಪೊಲೀಸ್ ಎಕ್ಸ್ ಖಾತೆಯನ್ನು ಉಲ್ಲೇಖಿಸಿದ್ದರು. ಇದರ ಆಧಾರದ ಮೇಲೆ ದೂರು ದಾಖಲಿಸಿಕೊಂಡು ಕ್ರಮಕ್ಕೆ ಮುಂದಾದ ಹಲಸೂರು ಗೇಟ್ ಉಪ ವಿಭಾಗದ ಎಸ್ ಜೆ ಪಾರ್ಕ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿಸಿದ ಬಳಿಕ ಎಂದಿನಂತೆ ರೀಲ್ಸ್ ಹುಚ್ಚಿನಿಂದ ಅಪರಾಧ ಎಸಗಿದ ಈತನಿಗೂ ರೀಲ್ಸ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಆತನದ್ದೇ ರಸ್ತೆ ಮಧ್ಯೆ ಕುಳಿತು ಟೀ ಕುಡಿಯುವ ವಿಡಿಯೊಗೆ ಕನ್ನಡದ ಪ್ರಸಿದ್ಧ ಕಾಮಿಡಿ ದೃಶ್ಯವೊಂದರನ್ನು ಹಂಚಿಕೊಂಡು ಕಾಲೆಳೆದಿದೆ. ರಂಗಾಯಣ ರಘು ಆಡಿಷನ್ನಲ್ಲಿ ಮಾಡುವ ನಟನೆಗೆ ನಿರ್ದೇಶಕ ಹೇಳುವ ‘ಅಣ್ಣಾ.. ಇನ್ನೂ ಏನೋ ಬೇಕಣ್ಣ..’ ಎಂಬ ದಶ್ಯವನ್ನು ಎಡಿಟ್ ಮಾಡಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


