ಬೆಂಗಳೂರು: ರಾಜ್ಯ ಸರ್ಕಾರ ಇಂದು ( ಆಗಸ್ಟ್ 18 ) ಬೆಂಗಳೂರಿನ ಹೆಬ್ಬಾಳದಲ್ಲಿ ನೂತನವಾಗಿ ನಿರ್ಮಿಸಿರುವ ಮೇಲ್ಸೇತುವೆಯನ್ನು ಉದ್ಘಾಟಿಸಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇತುವೆ ಮೇಲೆ ಹಸಿರು ನಿಶಾನೆ ತೋರಿಸಿ ಸೇತುವೆಯನ್ನು ಉದ್ಘಾಟಿಸಿದರೆ, ಯೆಝ್ಡಿ ಬೈಕ್ ಮೇಲೆ ಸವಾರಿ ಮಾಡುವ ಮೂಲಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇತುವೆಯ ಮೊದಲ ಫಲನುಭವಿಯಾದರು.
ಈ ಫೋಟೊವನ್ನು ಉಪ ಮುಖ್ಯಮಂತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಮೇಲ್ಸೇತುವೆಯ ಉದ್ದೇಶ ಹಾಗೂ ಅನುಕೂಲಗಳ ಬಗ್ಗೆ ಬರೆದುಕೊಂಡಿದ್ದಾರೆ.
ಈ ಫ್ಲೈಓವರ್ ವಿಸ್ತರಣೆಯು 700 ಮೀಟರ್ ಉದ್ದವಿದ್ದು, 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೆಬ್ಬಾಳದ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಇದನ್ನು ನಿರ್ಮಿಸಲಾಗಿದೆ.
ಇದರಿಂದ ಕೆ.ಆರ್.ಪುರಂ ಕಡೆಯಿಂದ ಬರುವ ವಾಹನಗಳು ನೇರವಾಗಿ ಮೇಖ್ರಿ ವೃತ್ತದ ಕಡೆಗೆ ಸಾಗಬಹುದು. ಇದರಿಂದ ಹೆಬ್ಬಾಳದಲ್ಲಿ ಟ್ರಾಫಿಕ್ ಕಡಿಮೆಯಾಗುವ ನಿರೀಕ್ಷೆಯಿದೆ. ಹೆಬ್ಬಾಳ ಮೇಲ್ಸೇತುವೆಯ ಲೂಪ್ ತೆರೆಯುವುದರಿಂದ ಬೆಂಗಳೂರಿನ ಕುಖ್ಯಾತ ಸಂಚಾರ ದಟ್ಟಣೆಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.
ಆದಾಗ್ಯೂ ನಗರದ ಸಂಚಾರ ಪೊಲೀಸರು ಹಾಗೂ ನಾಗರಿಕ ಸಂಸ್ಥೆಗಳು ಜಾಗರೂಕರಾಗಿರುತ್ತಾರೆ. ಏಕೆಂದರೆ ಮಾರ್ಗ ಬದಲಾವಣೆಗಳು ಹತ್ತಿರದ ಪ್ರದೇಶಗಳಿಗೆ ದಟ್ಟಣೆಯನ್ನು ಬದಲಾಯಿಸಬಹುದು.
ದರ್ಶನ್ ಫ್ಯಾನ್ಸ್ ಅಶ್ಲೀಲ ಮೆಸೇಜ್: ಬರೀ 7 ಜನರ ಬಂಧನವಾಗಿದೆ ಎಂದ ರಮ್ಯಾ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


