2003ರ ವಿಶ್ವಕಪ್ ಟೂರ್ನಿ.. ಈ ಟೂರ್ನಿಯಲ್ಲಿ ಭಾರತ ಫೈನಲ್ ತಲುಪಿ 2023ರ ರೀತಿಯೇ ಕೊನೆಯ ಪಂದ್ಯದಲ್ಲಿ ದೈತ್ಯ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
ಈ ಮೂಲಕ ಸೌರವ್ ಗಂಗೂಲಿ ಪಡೆ ಕೊನೆಯ ಹಂತದಲ್ಲಿ ಎಡವಿ ವಿಶ್ವ ಚಾಂಪಿಯನ್ ಆಗುವ ಬೃಹತ್ ಅವಕಾಶವನ್ನು ಕೈತಪ್ಪಿಸಿಕೊಂಡಿತು. ಈ ಟೂರ್ನಿಗೆ ಬಿಸಿಸಿಐ 15 ಆಟಗಾರರ ತಂಡವನ್ನು ಪ್ರಕಟಿಸಿತ್ತು. ಇದೇ ತಂಡದಲ್ಲಿದ್ದ ಓರ್ವ ಆಟಗಾರ ಇದೀಗ ಮೈದಾನಕ್ಕೆ ತೆರಳಿ ಆಟಗಾರರಿಗೆ ನೀರನ್ನು ಸರಬರಾಜು ಮಾಡುವುದರ ಕುರಿತು ತಮ್ಮ ಸ್ವಂತ ಅನುಭವವನ್ನು ಹೇಳಿಕೊಂಡಿದ್ದಾರೆ.
ಹೌದು, ಕಾಮಿಡಿ ಫ್ಯಾಕ್ಟರಿಯ ಲವರಿ ಶೋನಲ್ಲಿ ಭಾಗವಹಿಸಿದ್ದ ಭಾರತದ ಮಾಜಿ ಕ್ರಿಕೆಟಿಗ ನೀರು ಸರಬರಾಜು ಮಾಡುವ ಕುರಿತು ತಮಾಷೆ ಮಾಡಿದ್ದಾರೆ. ʼನೀರಿನ ಬಗ್ಗೆ ಮಾತನಾಡಬೇಡಿ. ನಾನು 85 ಏಕದಿನ ಪಂದ್ಯಗಳಲ್ಲಿ ನೀರು ಸರಬರಾಜು ಮಾಡಿದ್ದೇನೆ. ರಾಹುಲ್ ದ್ರಾವಿಡ್ ವಿಕೆಟ್ ಕೀಪರ್ ಆಗಿದ್ದಾಗ ನಾನು ನೀರು ಸರಬರಾಜು ಮಾಡುತ್ತಿದ್ದೆ. 2003ರ ವಿಶ್ವಕಪ್ ಟೂರ್ನಿಯುದ್ದಕ್ಕೂ ನಾನು ನೀರು ಸರಬರಾಜು ಮಾಡಿದ್ದೇನೆ. ಆದರೆ ನಾನು ಆ ಸಮಯಕ್ಕೆ ಕೇವಲ ನೀರು ಸರಬರಾಜು ಮಾಡಿಯೇ ಮನೆ ಕಟ್ಟಿಕೊಂಡಿದ್ದೇನೆʼ ಎಂದರು.
ಪಾರ್ಥಿವ್ ಪಟೇಲ್ 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರಾದರೂ ಒಂದೇ ಒಂದು ಪಂದ್ಯದಲ್ಲಿಯೂ ಕಣಕ್ಕಿಳಿಯುವ ಅವಕಾಶ ಪಡೆಯಲಿಲ್ಲ. ರಾಹುಲ್ ದ್ರಾವಿಡ್ರ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಪಟೇಲ್ ಆಯ್ಕೆಯಾಗಿದ್ದರು.
ಆಂಧ್ರಪ್ರದೇಶದಲ್ಲಿ ಮತ್ತೆ ಎನ್ಕೌಂಟರ್: ಮತ್ತೆ 7 ನಕ್ಸಲರ ಹತ್ಯೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


