ಬೆಂಗಳೂರು: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ದೂರಿನ ಕುರಿತಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ನಟಿ ರಮ್ಯಾ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಎಸ್ಐಟಿ ತನಿಖೆ ವರದಿಗಳು ಇನ್ನೂ ಬರಬೇಕಿದ್ದು, ವರದಿ ಬಂದಮೇಲೆ ಸತ್ಯ ಹೊರ ಬರಲಿದೆ ಎಂದರು. ತನಿಖೆ ನಡೆಸುತ್ತಿರುವ ಎಸ್ಐಟಿ ತಂಡದಲ್ಲಿ ಒಳ್ಳೊಳ್ಳೆ ಪೊಲೀಸರಿದ್ದಾರೆ, ವರದಿಯಲ್ಲಿ ಕೊಲೆಗಳು ನಡೆದಿವೆಯೋ ಇಲ್ಲವೋ ಎಂಬುದು ತಿಳಿಯಲಿದೆ ಎಂದರು.
ಇನ್ನು ಎಸ್ಐಟಿ ತನಿಖೆ ಸದ್ಯ ನಿಲ್ಲಿಸಲಾಗಿದ್ದು, ಈವರೆಗೆ 15 ಜಾಗಗಳಲ್ಲಿ ಉತ್ಖನನ ಕಾರ್ಯಾಚರಣೆಯನ್ನು ಮಾಡಲಾಗಿದೆ. ಈ ಪೈಕಿ 2 ಕಡೆ ಅಸ್ತಿಪಂಜರದ ಮೂಳೆಗಳು ಪತ್ತೆಯಾಗಿದ್ದು, ಸದ್ಯ ಇವುಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದ್ದು, ಇವುಗಳ ವರದಿ ಬಂದ ಬಳಿಕ ಎಸ್ಐಟಿ ಅಧಿಕಾರಿಗಳು ತಮ್ಮ ತನಿಖೆ ಮುಂದುವರಿಸಲಿದ್ದಾರೆ.
ಭವಿಷ್ಯದಲ್ಲಿ ಮಾನವ ದೇಹದಿಂದ ಕಣ್ಮರೆಯಾಗಲಿರುವ ಅಂಗಗಳು
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


