ಶಿವಮೊಗ್ಗ: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಬಗ್ಗೆ ಆರೋಪ ಮಾಡಿರುವ ಧರ್ಮಸ್ಥಳ ಮಾಜಿ ಸ್ವಚ್ಛತಾ ಸಿಬ್ಬಂದಿಯೋರ್ವ ಕೊಲೆಯಾದ ಹೆಣಗಳನ್ನು ತಾನೇ ಹೂತಿದ್ದು ಅವುಗಳನ್ನು ಹೊರತೆಗೆದು ತೋರಿಸುವುದಾಗಿ ದೂರು ದಾಖಲಿಸಿದ್ದಾನೆ.
ಈ ಬೃಹತ್ ಬೆಳವಣಿಗೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್ಐಟಿ ರಚಿಸಿ ತನಿಖೆಗೆ ಆದೇಶ ಹೊರಡಿಸಿದ್ದು, ಇಂದಿನಿಂದ ( ಜುಲೈ 23 ) ತನಿಖೆ ಆರಂಭವಾಗಿದೆ. ಈ ಮಹತ್ವದ ಬೆಳವಣಿಗೆ ಬಗ್ಗೆ ಸದ್ಯ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಜೆಡಿಎಸ್ ಪಕ್ಷ ಬಲವರ್ಧನೆಗೆ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ್ದು, ತನಿಖೆ ನಡೆಯಲಿ ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ, ತೀರ್ಪು ಬರಲಿ ಬಳಿಕ ಮಾತನಾಡುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ಎಸ್ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ.
ಥಿಯೇಟರ್ಗೆ ನುಗ್ಗಿ ಪವನ್ ಕಲ್ಯಾಣ್ ಚಿತ್ರದ ಬ್ಯಾನರ್ಗಳನ್ನು ಕಿತ್ತೆಸೆದ ಕನ್ನಡಿಗರು; ವಿಡಿಯೊ
ಎಐ ಕೃಷಿ ಕನ್ನಡ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


