ಬೆಂಗಳೂರು: 2025ರ ವರ್ಷವು ವಿದಾಯದ ಹೊಸ್ತಿಲಲ್ಲಿದೆ. ಆದರೆ, 2026ರ ಆರಂಭ ಕೇವಲ ಕ್ಯಾಲೆಂಡರ್ ದಿನಾಂಕದ ಬದಲಾವಣೆಯಲ್ಲ ಇದು ಜನಸಾಮಾನ್ಯರ ಬದುಕಿನ ಗತಿಯನ್ನೇ ಬದಲಿಸಲಿರುವ ನಿಯಮಗಳ ಹೊಸ ಪರ್ವ. ಜನವರಿ 1ರಿಂದ ಜಾರಿಗೆ ಬರಲಿರುವ ಈ ಕ್ರಾಂತಿಕಾರಿ ಬದಲಾವಣೆಗಳು ಅಡುಗೆ ಮನೆಯ ಗ್ಯಾಸ್ ಸಿಲಿಂಡರ್ನಿಂದ ಹಿಡಿದು ಬ್ಯಾಂಕಿಂಗ್ ವ್ಯವಹಾರಗಳವರೆಗೆ ನೇರ ಪ್ರಭಾವ ಬೀರಲಿವೆ.
ರೈತರು, ಸರ್ಕಾರಿ ನೌಕರರು, ಯುವಜನತೆ ಹಾಗೂ ಸಾಮಾನ್ಯ ನಾಗರಿಕರ ಆರ್ಥಿಕ ಶಿಸ್ತಿನ ಮೇಲೆ ಪರಿಣಾಮ ಬೀರುವ ಈ ಹೊಸ ಮಾರ್ಗಸೂಚಿಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಈಗ ಅನಿವಾರ್ಯವಾಗಿದೆ. ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರಲಿರುವ ಆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ
1.ಬ್ಯಾಂಕಿಂಗ್ ಕ್ಷೇತ್ರದಲ್ಲಿ ‘ವೇಗದ’ ಬದಲಾವಣೆ
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಈವರೆಗೆ 15 ದಿನಕ್ಕೊಮ್ಮೆ ಅಪ್ಡೇಟ್ ಆಗುತ್ತಿದ್ದ ಕ್ರೆಡಿಟ್ ಸ್ಕೋರ್ (Credit Score) ಇನ್ಮುಂದೆ ಪ್ರತಿ ವಾರ ನವೀಕರಣಗೊಳ್ಳಲಿದೆ. ಇದು ಸಾಲ ಪಡೆಯುವವರಿಗೆ ವರದಾನವಾಗಲಿದೆ. ಜೊತೆಗೆ SBI, PNB ಮತ್ತು HDFC ಬ್ಯಾಂಕ್ಗಳ ಬಡ್ಡಿದರ ಪರಿಷ್ಕರಣೆಯಿಂದಾಗಿ ಸಾಲ ಮತ್ತು ಎಫ್ಡಿ (Fixed Deposit) ಮೇಲಿನ ಲಾಭದಲ್ಲಿ ಏರಿಳಿತವಾಗಲಿದೆ.SBI, PNB ಮತ್ತು HDFC ನಂತಹ ಪ್ರಮುಖ ಬ್ಯಾಂಕುಗಳು ಸಾಲದ ಬಡ್ಡಿದರವನ್ನು ಇಳಿಕೆ ಮಾಡಿದ್ದು, ಇದರ ಲಾಭ 2026ರಲ್ಲಿ ಗ್ರಾಹಕರಿಗೆ ಸಿಗಲಿದೆ.
2.8ನೇ ವೇತನ ಆಯೋಗದ ನಿರೀಕ್ಷೆ
ಸರ್ಕಾರಿ ನೌಕರರಿಗೆ ಹೊಸ ವರ್ಷ ಭರ್ಜರಿ ಗಿಫ್ಟ್ ನೀಡುವ ಸಾಧ್ಯತೆಯಿದೆ. 7ನೇ ವೇತನ ಆಯೋಗದ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ, 8ನೇ ವೇತನ ಆಯೋಗ ಜಾರಿಗೆ ಬರುವ ನಿರೀಕ್ಷೆಯಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಬಳ ಹಾಗೂ ತುಟ್ಟಿಭತ್ಯೆ (DA) ಗಣನೀಯವಾಗಿ ಹೆಚ್ಚಾಗಲಿದೆ.7ನೇ ವೇತನ ಆಯೋಗದ ಅವಧಿ 2025ರ ಡಿಸೆಂಬರ್ 31ಕ್ಕೆ ಮುಕ್ತಾಯವಾಗಲಿದ್ದು, 2026ರ ಜನವರಿ 1ರಿಂದ 8ನೇ ವೇತನ ಆಯೋಗ ಜಾರಿಗೆ ಬರುವ ನಿರೀಕ್ಷೆಯಿದೆ. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಬಳದಲ್ಲಿ ಭಾರಿ ಏರಿಕೆಯಾಗಲಿದೆ.
3.ರೈತರಿಗೆ ‘ಐಡಿ’ ಕಡ್ಡಾಯ, ವನ್ಯಜೀವಿ ಹಾನಿಗೂ ವಿಮೆ!
PM ಕಿಸಾನ್: ರೈತರು ತಮ್ಮ ಮುಂದಿನ ಕಂತಿನ ಹಣ ಪಡೆಯಲು ‘ರೈತ ಗುರುತಿನ ಚೀಟಿ’ ಕಡ್ಡಾಯ. ಈ ದಾಖಲೆ ಇಲ್ಲದಿದ್ದರೆ ಹಣ ಜಮೆಯಾಗುವುದಿಲ್ಲ.ಕಾಡು ಪ್ರಾಣಿಗಳಿಂದ ಬೆಳೆ ನಾಶವಾದರೂ ರೈತರಿಗೆ ಇನ್ಮುಂದೆ ವಿಮೆ ಸಿಗಲಿದೆ. ಆದರೆ, ಹಾನಿಯಾದ 72 ಗಂಟೆಯೊಳಗೆ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಕಡ್ಡಾಯ.ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರಿಗೆ ಪ್ರತ್ಯೇಕ ಐಡಿ ಕಾರ್ಡ್ ನೀಡಲಾಗುತ್ತಿದೆ. ಪಿಎಂ ಕಿಸಾನ್ (PM Kisan) ಯೋಜನೆಯ ಹಣ ಪಡೆಯಲು ಈ ಐಡಿ ಕಡ್ಡಾಯವಾಗಲಿದೆ.
4.ಸೋಷಿಯಲ್ ಮೀಡಿಯಾಗೆ ಬ್ರೇಕ್?
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆಸ್ಟ್ರೇಲಿಯಾ ಮಾದರಿಯಲ್ಲಿ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವ ಮೇಲೆ ಕಠಿಣ ನಿಯಮಗಳನ್ನು ತರಲು ಸರ್ಕಾರ ಸಜ್ಜಾಗಿದೆ.
5.ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ಕಷ್ಟ!
ಡಿಜಿಟಲ್ ವಂಚನೆ ತಡೆಯಲು ಬ್ಯಾಂಕುಗಳು ಆಧಾರ್–ಪ್ಯಾನ್ ಲಿಂಕ್ ಅನ್ನು ಕಡ್ಡಾಯಗೊಳಿಸಿವೆ. ಈ ಲಿಂಕ್ ಇಲ್ಲದಿದ್ದರೆ ಯುಪಿಐ (UPI) ಪಾವತಿ ಮತ್ತು ಸಿಮ್ ಕಾರ್ಡ್ ವೆರಿಫಿಕೇಶನ್ನಲ್ಲಿ ತೊಂದರೆ ಎದುರಾಗಬಹುದು.
6.ಇಂಧನ ಮತ್ತು ವಿಮಾನ ದರದಲ್ಲಿ ಬದಲಾವಣೆ
ಜನವರಿ 1ರಂದು ಎಲ್ಪಿಜಿ ಅಡುಗೆ ಅನಿಲ ಮತ್ತು ವಾಣಿಜ್ಯ ಸಿಲಿಂಡರ್ಗಳ ಹೊಸ ದರ ಪ್ರಕಟವಾಗಲಿದೆ. ಇದರ ಜೊತೆಗೆ ವಿಮಾನ ಇಂಧನ (ATF) ಬೆಲೆ ಬದಲಾವಣೆಯಿಂದ ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ.
7.ಟ್ರಾಫಿಕ್ ರೂಲ್ಸ್ ಮತ್ತು ಮಾಲಿನ್ಯ ನಿಯಂತ್ರಣ
ದೆಹಲಿ ಮತ್ತು ನೋಯ್ಡಾದಂತಹ ನಗರಗಳಲ್ಲಿ ಮಾಲಿನ್ಯ ತಡೆಗೆ ಪೆಟ್ರೋಲ್ ಹಾಗೂ ಡೀಸೆಲ್ ವಾಣಿಜ್ಯ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಸಿದ್ಧತೆ ನಡೆಸಲಾಗಿದೆ.
₹14,000ರ ಸನಿಹಕ್ಕೆ ತಲುಪಿದ ಹಳದಿ ಲೋಹ! ಬೆಂಗಳೂರು ಸೇರಿ ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಇಲ್ಲಿದೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


