ಬೆಂಗಳೂರು: ರಾಜ್ಯ ಕಂಡ ಯಶಸ್ವಿ ಮುಖ್ಯಮಂತ್ರಿಗಳಲ್ಲಿ ಓರ್ವರಾದ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದು, ಈ ಬಾರಿ ಅವರು 5 ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರಿಯುವುದು ಅನುಮಾನ ಎಂಬ ಮಾತುಗಳು ಅಧಿಕಾರ ಸ್ವೀಕರಿಸಿದ ದಿನದಿಂದಲೂ ಕೇಳಿಬರುತ್ತಲೇ ಇದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ, ನವೆಂಬರ್ ಅಷ್ಟರಲ್ಲಿ ಸಿದ್ದರಾಮಯ್ಯ ಪವರ್ ಕಳೆದುಕೊಳ್ಳಲಿದ್ದಾರೆ ಎಂಬ ಹೇಳಿಕೆಗಳು ಸಹ ರಾಜಕೀಯ ನಾಯಕರ ಬಾಯಿಂದ ಬಂದಿದ್ದು, ಇದೀಗ ಡಿಜಿಟಲ್ ಜ್ಯೋತಿಷಿ ಪ್ರಶಾಂತ್ ಕಿಣಿ ಈ ಕುರಿತು ಮಾಡಿರುವ ಟ್ವೀಟ್ ಚರ್ಚೆಗೆ ಕಾರಣವಾಗಿದೆ.
ಹೌದು, ರಾಜ್ಯ ರಾಜಕೀಯ, ವಿದೇಶಗಳ ಸ್ಥಿತಿಗತಿ ಬಗ್ಗೆ ಆಗಾಗ ಟ್ವೀಟ್ ಮಾಡುವ ಪ್ರಶಾಂತ್ ಕಿಣಿ ‘ರಾಜ್ಯ ಕಾಂಗ್ರೆಸ್ ಎರಡು ಭಾಗವಾಗಲಿದೆ. ಸಿಎಂ ಸಿದ್ದರಾಮಯ್ಯ ಅವರ ಹುದ್ದೆ ಕಳೆದುಕೊಳ್ಳಲಿದ್ದಾರೆ. ರಾಜ್ಯದ ಜನತೆ ಬೆಲೆ ತೆರಲಿದ್ದಾರೆ. ಮೈಸೂರು ಹಲವು ತೊಂದರೆಗಳನ್ನು ಎದುರಿಸಲಿದೆ. ಭವಿಷ್ಯದಲ್ಲಿ ಕರ್ನಾಟಕ ಇಬ್ಭಾಗವಾಗಲಿದೆ’ ಎಂದು ಬರೆದುಕೊಂಡಿದ್ದಾರೆ.
ಹೀಗೆ ಭವಿಷ್ಯ ನುಡಿದಿರುವ ಟ್ವೀಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದ ಜನತೆ ಬೆಲೆ ತೆರಬೇಕಾಗುತ್ತದೆ ಎಂಬ ಸಾಲು ಪ್ರಶಾಂತ್ ಕಿಣಿ ಕಾಂಗ್ರೆಸ್ ವಿರೋಧಿಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದ್ದು, ಈ ರೀತಿಯ ಟ್ವೀಟ್ ಮೂಲಕ ಜ್ಯೋತಿಷ್ಯ ನಂಬುವ ಜನರನ್ನು ದಿಕ್ಕು ತಪ್ಪಿಸುವ ಷಡ್ಯಂತ್ರವಾ ಎಂಬ ಅನುಮಾನ ಸಹ ಮೂಡಿದೆ.
ಈ ಹಿಂದೆ ದರ್ಶನ್ ಬಿಡುಗಡೆಯಾಗಲಿದ್ದಾರೆ, ಅವರಿಗೆ ಒಳ್ಳೆ ಕಾಲ ಶುರುವಾಗಲಿದೆ ಎಂದು ಟೊಳ್ಳು ಭವಿಷ್ಯ ನುಡಿದಿದ್ದ ಪ್ರಶಾಂತ್ ಕಿಣಿಯ ಈ ಭವಿಷ್ಯ ಏನಾಗಲಿದೆಯೋ ಉತ್ತರ ಸಿಗಲಿದೆ. ಅಲ್ಲದೇ ಇಷ್ಟೆಲ್ಲಾ ಬರೆದುಕೊಂಡಿರುವ ಪ್ರಶಾಂತ್ ಕಿಣಿ ಈ ಘಟನೆಗಳೆಲ್ಲ ಯಾವಾಗ ನಡೆಯಲಿದೆ ಎಂಬುದನ್ನು ತಿಳಿಸದೇ ಇದ್ದು, ಅರೆ ಬೆಂದ ಭವಿಷ್ಯ ಬಿಟ್ಟು ಪೂರ್ಣ ಪ್ರಮಾಣದ ಭವಿಷ್ಯವನ್ನು ತಿಳಿಸಿದ್ದರೆ, ಜನರಿಗೆ ನಿಖರತೆಯಾದರೂ ಸಿಗುತ್ತಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


