ಭಾರತ ಸರ್ಕಾರವು ಸೈಬರ್ ಅಪರಾಧ ಜಾಗೃತಿಗಾಗಿ ಬಳಸಲಾಗುತ್ತಿದ್ದ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಧ್ವನಿಯ ಕಾಲರ್ ಟ್ಯೂನ್ ಅನ್ನು ತಕ್ಷಣವೇ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಪ್ರತಿ ಮೊಬೈಲ್ ಕರೆಗೂ ಮುನ್ನ 40 ಸೆಕೆಂಡುಗಳ ಕಾಲ ಪ್ಲೇ ಆಗುತ್ತಿದ್ದ ಈ ಕಾಲರ್ ಟ್ಯೂನ್ವು ಗ್ರಾಹಕರಿಗೆ ಕಿರಿಕಿರಿ ಮತ್ತು ತುರ್ತು ಸಂದರ್ಭಗಳಲ್ಲಿ ಕರೆ ವಿಳಂಬಕ್ಕೆ ಕಾರಣವಾಗುತ್ತಿತ್ತು.ಸಾರ್ವಜನಿಕ ದೂರುಗಳು ಹಾಗೂ ತುರ್ತು ಕಾಲಗಳಲ್ಲಿ ತ್ವರಿತ ಪ್ರತಿಕ್ರಿಯೆಗೆ ಅಡ್ಡಿಯಾಗುತ್ತಿರುವುದರಿಂದ, ಸಂವಹನ ಸಚಿವಾಲಯವು ಈ ಮಹತ್ವದ ಹೆಜ್ಜೆಯನ್ನು ತೆಗೆದುಕೊಂಡಿದೆ. ಅಮಿತಾಬ್ ಬಚ್ಚನ್ ಅವರ ಧ್ವನಿಯಲ್ಲಿ ಸೈಬರ್ ವಂಚನೆ ಜಾಗೃತಿ ಸಂದೇಶವನ್ನು ಮೊಬೈಲ್ ಕರೆಗಳಿಗೆ ಮುನ್ನ ಪ್ಲೇ ಮಾಡಲಾಗುತ್ತಿತ್ತು, ಆದರೆ ಜನರಿಂದ ಬಂದ ವಿರೋಧ ಮತ್ತು ತುರ್ತು ಕಾಲ್ಗಳಿಗೆ ಅಡ್ಡಿಯಾಗುತ್ತಿರುವ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಈ ಕಾಲರ್ ಟ್ಯೂನ್ ಅನ್ನು ಇಂದಿನಿಂದಲೇ ತೆಗೆದುಹಾಕಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.ಈ ಕ್ರಮದಿಂದ ಬಳಕೆದಾರರು ತುರ್ತು ಕರೆಗಳನ್ನು ಸುಗಮವಾಗಿ ಮಾಡಿಕೊಳ್ಳಲು ಸಾಧ್ಯವಾಗಿದ್ದು, ಸೈಬರ್ ಅಪರಾಧ ಜಾಗೃತಿ ಅಭಿಯಾನ ಮುಂದುವರಿಯುವಂತೆ ಸರ್ಕಾರ ಇತರ ಮಾರ್ಗಗಳನ್ನು ಹುಡುಕಲಿದೆ ಎಂದು ತಿಳಿಸಲಾಗಿದೆ.
ಈ ಕಾಲರ್ ಟ್ಯೂನ್ ಅನ್ನು ಏಕೆ ಪರಿಚಯಿಸಲಾಯಿತು?
ಭಾರತದಲ್ಲಿ ಸೈಬರ್ ವಂಚನೆಗಳು ಹಾಗೂ ಡಿಜಿಟಲ್ ಮೋಸ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಎಲ್ಲಾ ದೂರವಾಣಿ ಕರೆಗಳಿಗೆ ಮುನ್ನ ಜಾಗೃತಿಪೂರ್ಣ ಸಂದೇಶವೊಂದನ್ನು ಪ್ರಸಾರ ಮಾಡಲು ದೂರಸಂಪರ್ಕ ಕಂಪನಿಗಳಿಗೆ ಸೂಚನೆ ನೀಡಿತ್ತು. ಈ ಸಂದೇಶವನ್ನು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಧ್ವನಿಯಲ್ಲಿ ದಾಖಲಿಸಲಾಗಿತ್ತು. ಈ ಸಂದೇಶದಲ್ಲಿ ಜನರಿಗೆ ವಂಚನೆಯ ಕರೆಗಳು, ಫಿಶಿಂಗ್ ಲಿಂಕ್ಗಳು, ಅಪರಿಚಿತ ಒಟಿಪಿ ಅಥವಾ ಲಿಂಕ್ಗಳನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಲಾಗುತ್ತಿತ್ತು.
ಇದೊಂದು ಉತ್ತಮ ಹಾದಿಯಾಗಿ ಪ್ರಾರಂಭಗೊಂಡಿತ್ತು, ಏಕೆಂದರೆ ದೇಶದಲ್ಲಿ ಪ್ರತಿದಿನವೂ ಸಾವಿರಾರು ಜನರು ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿದ್ದರು. ಆದರೂ, ಸುಮಾರು 40 ಸೆಕೆಂಡುಗಳ ಈ ಸಂದೇಶ ಪ್ರತಿಯೊಂದು ಕರೆಗೂ ಮರುಮರು ಕೇಳಿಸಿತಲ್ಲದೆ, ತುರ್ತು ಸಂದರ್ಭಗಳಲ್ಲಿ ಕರೆ ಮಾಡಲು ವಿಳಂಬವಾಗುತ್ತಿರುವ ಕಾರಣ ಜನರಲ್ಲಿ ಕಿರಿಕಿರಿ ಉಂಟಾಗಿತ್ತು. ಹೀಗಾಗಿ ಇದನ್ನು ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.
ಜೂ.26ರಿಂದ ಸೈಬರ್ ಕ್ರೈಂ ಕಾಲರ್ ಟ್ಯೂನ್ ಸ್ಥಗಿತ: ಜನರ ಒತ್ತಾಯಕ್ಕೆ ಸರ್ಕಾರ ಸ್ಪಂದನೆ
ಭಾರತ ಸರ್ಕಾರವು ಸೈಬರ್ ಕ್ರೈಂ ಜಾಗೃತಿಗಾಗಿ ಬಳಕೆದಾರರು ಪ್ರತಿಯೊಬ್ಬ ಫೋನ್ ಕರೆ ಮಾಡುವಾಗ ಕೇಳುತ್ತಿದ್ದ ಅಮಿತಾಬ್ ಬಚ್ಚನ್ ಅವರ ಧ್ವನಿಯ ಕಾಲರ್ ಟ್ಯೂನ್ ಅನ್ನು ಜೂನ್ 26ರಿಂದ ಸ್ಥಗಿತಗೊಳಿಸಿದೆ. ಈ ಕಾಲರ್ ಟ್ಯೂನ್ ತುರ್ತು ಸಂದರ್ಭಗಳಲ್ಲಿ ವಿಳಂಬಕ್ಕೆ ಕಾರಣವಾಗುತ್ತಿದ್ದು, ಜನರಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿತ್ತು.ಇತ್ತೀಚೆಗೆ ‘ವಿಕ್ಕಿ ಪೀಡಿಯಾ’ ಎಂಬ ಕನ್ನಡ ಇನ್ಸ್ಟಾಗ್ರಾಮ್ ಕಾಂಟೆಂಟ್ ಕ್ರಿಯೇಟರ್ಗಳು ಈ ಅಭಿಯಾನದ ಬಗ್ಗೆ ವ್ಯಂಗ್ಯ ರೀಲ್ಸ್ಗಳನ್ನು ಹಂಚಿಕೊಂಡಿದ್ದರು. ಒಂದರಲ್ಲಿ, ಕಳ್ಳ ಮನೆಗೆ ನುಗ್ಗಿದ್ದಾಗ ಮಹಿಳೆ ಪೊಲೀಸರಿಗೆ ಕರೆ ಮಾಡಲು ಯತ್ನಿಸುತ್ತಾಳೆ. ಆದರೆ, ಕಾಲರ್ ಟ್ಯೂನ್ ಬರುವ ಅವಧಿಯಲ್ಲಿ ಕಳ್ಳ ಎಲ್ಲವನ್ನೂ ದೋಚಿ ಪರಾರಿಯಾಗುತ್ತಾನೆ ಎಂಬ ದೃಶ್ಯ ಜನರಲ್ಲಿ ಭಾರಿ ವೈರಲ್ ಆಗಿತ್ತು.
ಇಷ್ಟೇ ಅಲ್ಲದೆ, ಎಕ್ಸ್ (ಹಳೆಯ ಟ್ವಿಟರ್) ನಲ್ಲಿ ಅನೇಕ ನೆಟ್ಟಿಗರು ನೇರವಾಗಿ ಅಮಿತಾಬ್ ಬಚ್ಚನ್ ಅವರನ್ನೇ ಟ್ಯಾಗ್ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಜೂನ್ 26ರಿಂದ ಸೈಬರ್ ಕ್ರೈಂ ಜಾಗೃತಿ ಕಾಲರ್ ಟ್ಯೂನ್ ಅನ್ನು ಸ್ಥಗಿತಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.ಈ ನಿರ್ಧಾರದಿಂದ ಬಳಕೆದಾರರಿಗೆ ತುರ್ತು ಸಂದರ್ಭಗಳಲ್ಲಿ ಕರೆ ಮಾಡಲು ಯಾವುದೇ ವಿಳಂಬವಾಗದಂತೆ ಅನುಕೂಲವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ:
ಸೈಬರ್ ಕ್ರೈಂ ಜಾಗೃತಿ ಟ್ಯೂನ್ನಲ್ಲಿ ಅಮಿತಾಬ್ ಬಚ್ಚನ್ ಅವರ ಧ್ವನಿ ಕೇಳಿಸಿಕೊಂಡು, ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಲೇ ಇದ್ದರು. ಇತ್ತೀಚೆಗೆ ಎಕ್ಸ್ (ಹಳೆಯ ಟ್ವಿಟರ್) ನಲ್ಲಿ ಒಬ್ಬ ಬಳಕೆದಾರರು, “ಸರ್, ನಾನು ನಿಮ್ಮ ದೊಡ್ಡ ಅಭಿಮಾನಿ” ಎಂದು ಬರೆದಿದ್ದರೆ, ಮತ್ತೊಬ್ಬ ನಿಮ್ಮ ಧ್ವನಿಯಲ್ಲಿ ಬರುವ ಕಾಲರ್ ಟ್ಯೂನ್ ಜಾಗೃತಿಯನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದರು.
ಈ ಟೀಕೆಗಳಿಗೆ ಅಮಿತಾಬ್ ಬಚ್ಚನ್ ತಮ್ಮ ಹಾಸ್ಯಭರಿತ ಶೈಲಿಯಲ್ಲಿ ಪ್ರತಿಕ್ರಿಯಿಸಿ, ಸರ್ಕಾರವನ್ನ ಕೇಳಿ ಸಹೋದರ, ಅವರು ಹೇಳಿದ್ದರಿಂದ ನಾನು ಮಾಡಿದೆ. ನನ್ನ ಪಾತ್ರ ಇದರಲ್ಲಿ ಇಲ್ಲ ಎಂದು ಟ್ವೀಟ್ ಮಾಡಿದ್ದರು. ಅವರ ಈ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು,ಈ ಕಾಲರ್ ಟ್ಯೂನ್ ಸೈಬರ್ ಅಪರಾಧಿಗಳ ವಿರುದ್ಧ ಜಾಗೃತಿ ಮೂಡಿಸುವ ಸರ್ಕಾರದ ಅಭಿಯಾನದ ಭಾಗವಾಗಿತ್ತು. ಈ ಅಭಿಯಾನ ಈಗ ಪೂರ್ಣಗೊಂಡಿರುವ ಕಾರಣದಿಂದ, ಸರ್ಕಾರ ಈ ಕಾಲರ್ ಟ್ಯೂನ್ ಅನ್ನು ತೆಗೆದುಹಾಕಲು ನಿರ್ಧರಿಸಿದೆ.
ಸಾರಿಗೆ ನೌಕರರ ಬಾಕಿ ವೇತನ, ಸೌಲಭ್ಯಗಳಿಗೆ ತಕ್ಷಣ ಕ್ರಮ ಕೈಗೊಳ್ಳಿ: ಎನ್. ಶ್ರೀನಿವಾಸ್ ಒತ್ತಾಯ
ಕೃಷಿ ಎಐ ಕನ್ನಡ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


