ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಿನ್ನೆ ತಾನೇ ಮೈಸೂರಿಗೆ ಆಗಮಿಸಿರುವ ಎರಡನೇ ತಂಡದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು.
ನಿನ್ನೆ ಸಂಜೆ ಕಾಡಿನಿಂದ ಮೈಸೂರು ಅರಮನೆಗೆ ಎರಡನೇ ಹಂತದ ದಸರಾ ಗಜಪಡೆ ಆಗಮಿಸಿದ್ದು, ಇಂದು ಅವುಗಳಿಗೆ ತೂಕ ಪರೀಕ್ಷೆ ನಡೆಸಲಾಯಿತು.
ಮೈಸೂರು ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ನಡೆದ ಆನೆಗಳ ತೂಕ ಪರಿಶೀಲನೆಯಲ್ಲಿ ಹೇಮಾವತಿ 2440 ಕೆಜಿ, ಶ್ರೀಕಂಠ 5540 ಕೆಜಿ, ಸುಗ್ರೀವ 5545 ಕೆಜಿ, ರೂಪ 3320 ಕೆಜಿ ಹಾಗೂ ಗೋಪಿ 4990 ಕೆಜಿ ತೂಕವಿದೆ.
ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ದಸರಾ ಗಜಪಡೆಗಳು ಜಂಬೂಸವಾರಿ ಮೆರವಣಿಗೆಗೆ ತಾಲೀಮು ನಡೆಸಲಿದ್ದು, ಬೆಳಿಗ್ಗೆ ಸಂಜೆ ಎರಡು ಸಮಯವೂ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತದೆ.
ಮಗಳ ಭವಿಷ್ಯಕ್ಕೆ ₹28 ಲಕ್ಷ; ಪ್ರತಿದಿನ ಇಷ್ಟು ಹಣ ಉಳಿಸಿದರೆ ಸಾಕು, ಇಲ್ಲಿದೆ LIC ಜೀವನ್ ತರುಣ್ ಯೋಜನೆ ವಿವರ.
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


