ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಹಾಗೂ ತೇಜಸ್ವಿ ಸೂರ್ಯ ನಡುವೆ ಮಾತಿನ ಸಮರ ನಡೆಯುತ್ತಲೇ ಇದೆ. ಹೀಗೆ ವಾಕ್ಸಮರ ನಡೆಸಿದ ಬಳಿಕ ತೇಜಸ್ವಿ ಸೂರ್ಯ ಒಂದಷ್ಟು ಸಲಹೆಗಳನ್ನು ಪವರ್ಪಾಯಿಂಟ್ ಮೂಲಕ ಸಿದ್ಧಪಡಿಸಿ ಡಿಕೆ ಶಿವಕುಮಾರ್ ಮುಂದಿಟ್ಟಿದ್ದಾರೆ.
ಇಂದು ( ಅಕ್ಟೋಬರ್ 28 ) ಬೆಳ್ಳಂಬೆಳಗ್ಗೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ತೇಜಸ್ವಿ ಸೂರ್ಯ ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಇರುವ ಮಾರ್ಗಗಳು ಹಾಗೂ ಸುರಂಗ ಮಾರ್ಗದ ಬದಲಾಗಿ ಏನೆಲ್ಲ ಮಾಡಬಹುದು ಎಂದು ಡಿಕೆ ಶಿವಕುಮಾರ್ಗೆ ತಿಳಿಸಿದ್ದಾರೆ.
ಈ ಭೇಟಿ ಬಳಿಕ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ತೇಜಸ್ವಿ ಸೂರ್ಯ ಅವರು ಜಾಸ್ತಿ ಮೆಟ್ರೊ ಓಡಿಸಿ ಎಂದು ಹೇಳುತ್ತಿದ್ದಾರೆ, ಆ ಕೆಲಸವನ್ನು ನಾವು ಈಗಾಗಲೇ ಮಾಡುತ್ತಿದ್ದೇವೆ ಎಂದು ತಿಳಿಸಿದೆ. ಕೇಂದ್ರ ಸರ್ಕಾರದಿಂದ 10ರಿಂದ 12% ದುಡ್ಡು ಬರುತ್ತಿದೆ, ದುಡ್ಡು ಕೊಡಿಸಿ ಎಂದು ಹೇಳಿದೆ, ಅದಕ್ಕೆ ಪಾಪ ಅವರೇನು ಮಾತನಾಡುತ್ತಿಲ್ಲ ಎಂದರು.
ಅಲ್ಲದೇ ಬೆಂಗಳೂರಿನೊಳಗೆ ಬಸ್ಗಳನ್ನು ಖಾಸಗಿಯವರಿಗೂ ನೀಡಿ ಎಂದು ಹೇಳುತ್ತಿದ್ದಾರೆ. ಈಗಲೇ ಟ್ರಾಫಿಕ್ ಹೆಚ್ಚಿದೆ ಅದನ್ನು ಹೇಗೆ ಅಳವಡಿಸಿಕೊಳ್ಳಲು ಆಗುತ್ತೆ ಎಂದೆ. ಹಾಗೆಯೇ ನಾನು ಬರುತ್ತೇನೆ ನಿಮ್ಮ ನಾಲ್ಕು ಜನ ಎಂಪಿಗಳು ನಡೆಯಿರಿ ದೆಹಲಿಗೆ ಹೋಗೋಣ ಪ್ರಧಾನಮಂತ್ರಿಯವರ ಬಳಿ ದುಡ್ಡು ಕೊಡಿಸಿ ಎಂದು ಕೇಳಿದ್ದೇನೆ. ಲಾಲ್ಬಾಗ್ ನೀವು ತಿಳಿದುಕೊಂಡ ಹಾಗೆ 6 ಎಕರೆಯಲ್ಲಿ ಸುರಂಗ ಮಾಡುತ್ತಿಲ್ಲ ಒಂದು ಸಣ್ಣ ಮೂಲೆಯಲ್ಲಿ ಆರಂಭದ ಪಾಯಿಂಟ್ ಗುರುತಿಸಿದ್ದೇವೆ, ಬೇರೆ ಜಾಗ ಎಲ್ಲಾದರೂ ಇದ್ದರೆ ನೀವೇ ತೋರಿಸಿ ಎಂದಿದ್ದೇನೆ. ಅದಕ್ಕೆ ಅವರು ಇಲ್ಲ ಎಲ್ಲ ದೇಶದಲ್ಲೂ ಸುರಂಗ ಬೇಡ ಎಂದು ಹೇಳುತ್ತಿದ್ದಾರೆ ಎಂದರು. ನೀನು ಒಬ್ಬ ಹೇಳಿದಂಗೆ ಕೇಳೋಕೆ ಆಗಲ್ಲ ಎಂದು ತಿಳಿಸಿದೆ ಎಂದರು.
ಇನ್ನು ರಿಂಗ್ ರಸ್ತೆಗೆ ಬಸ್ ಸಂಪರ್ಕ ಸೇರಿದಂತೆ ಹಲವಾರು ಸಲಹೆಗಳನ್ನು ಅವರು ಕೊಟ್ಟಿದ್ದು, ಅವುಗಳನ್ನು ಅಧಿಕಾರಿಗಳಿಗೆ ಕಳುಹಿಸಿ ಪರಿಶೀಲಿಸಲು ಹೇಳಿದ್ದೇನೆ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


