Wednesday, September 2, 2026
spot_img
More
    spot_img
    HomeLatest newsಅಮರನಾಥ ಯಾತ್ರೆಗೆ ಹೊರಟ 1490 ಯಾತ್ರಿಕರ 27ನೇ ತಂಡ

    ಅಮರನಾಥ ಯಾತ್ರೆಗೆ ಹೊರಟ 1490 ಯಾತ್ರಿಕರ 27ನೇ ತಂಡ

    ಜಮ್ಮು-ಕಾಶ್ಮೀರ: ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಅಮರನಾಥ ಗುಹಾ ದೇವಾಲಯದ ಅವಳಿ ಮೂಲ ಶಿಬಿರಗಳಿಗೆ 1490 ಯಾತ್ರಿಕರ 27ನೇ ತಂಡ ಜಮ್ಮುವಿನಿಂದ ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಹೊರಟಿತು.

    Advertisement

    ಜುಲೈ.3ರಂದು ಕಣಿವೆಯಿಂದ 38 ದಿನಗಳ ತೀರ್ಥಯಾತ್ರೆ ಪ್ರಾರಂಭವಾದಾಗಿನಿಂದ 3.86 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಗುಹಾ ದೇವಾಲಯದಲ್ಲಿರುವ ಶಿವನ ಹಿಮಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ.

    1,262 ಪುರುಷರು, 186 ಮಹಿಳೆಯರು, 42 ಸಾಧುಗಳು ಮತ್ತು ಸಾಧ್ವಿಗಳು ಸೇರಿದಂತೆ 27ನೇ ತಂಡವು ಭಗವತಿ ನಗರ ಮೂಲ ಶಿಬಿರದಿಂದ 61 ವಾಹನಗಳಲ್ಲಿ ಕಾಶ್ಮೀರದ ಅವಳಿ ಮೂಲ ಶಿಬಿರಗಳಿಗೆ 61 ವಾಹನಗಳಲ್ಲಿ ಸಿಆರ್‍ಪಿಎಫ್ ಮತ್ತು ಪೊಲೀಸ್ ಸಿಬ್ಬಂದಿಯ ಬೆಂಗಾವಲಿನೊಂದಿಗೆ ಬೆಳಗಿನ ಜಾವ 3:25 ರಿಂದ 3.57ರ ನಡುವೆ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    16 ವಾಹನಗಳಲ್ಲಿ 327 ಯಾತ್ರಿಕರನ್ನು ಹೊತ್ತ ಮೊದಲ ಯಾತ್ರಿಕರ ಬೆಂಗಾವಲು 14 ಕಿಮೀ ಬಾಲ್ಟಾಲ್ ಮಾರ್ಗಕ್ಕೆ, ನಂತರ 45 ವಾಹನಗಳಲ್ಲಿ 1,163 ಯಾತ್ರಿಕರ ಎರಡನೇ ಬೆಂಗಾವಲು ಯಾತ್ರೆಯನ್ನು ಕೈಗೊಂಡಿದ್ದು, ಅನಂತ್‍ನಾಗ್ ಜಿಲ್ಲೆಯ 48 ಕಿಮೀ ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗದ ಮೂಲಕ ಯಾತ್ರೆ ಕೈಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

    ಇದರೊಂದಿಗೆ, ಜುಲೈ.2ರಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮೊದಲ ಬ್ಯಾಚ್‍ಗೆ ಚಾಲನೆ ನೀಡಿದ ನಂತರ ಒಟ್ಟು 14,27,85 ಯಾತ್ರಿಕರು ಜಮ್ಮು ಮೂಲ ಶಿಬಿರದಿಂದ ಕಣಿವೆಗೆ ತೆರಳಿದ್ದಾರೆ. ಕಳೆದ ವರ್ಷ, ನೈಸರ್ಗಿಕವಾಗಿ ರೂಪುಗೊಂಡ ಹಿಮಲಿಂಗವನ್ನು ಹೊಂದಿರುವ ಗುಹಾ ದೇವಾಲಯದಲ್ಲಿ 5.10 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪೂಜೆ ಸಲ್ಲಿಸಿದ್ದಾರೆ. ರಕ್ಷಾಬಂಧನ ಹಬ್ಬದೊಂದಿಗೆ ಆಗಸ್ಟ್.9ರಂದು ತೀರ್ಥಯಾತ್ರೆ ಕೊನೆಗೊಳ್ಳಲಿದೆ.

    ಕೇವಲ 10 ನಿಮಿಷಗಳಲ್ಲಿ ರೆಡಿ! ಹೆಲ್ದಿ ಅಂಡ್ ಟೇಸ್ಟಿ ಗೋಧಿ ದೋಸೆ ತಯಾರಿಸೋದು ತುಂಬಾ ಸುಲಭ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading