Thursday, September 3, 2026
spot_img
More
    spot_img
    HomeLatest newsಬನ್ನೇರುಘಟ್ಟ ಉದ್ಯಾನವನ ಟಿಕೆಟ್ ದರ ಪರಿಷ್ಕರಣೆ: ಟಿಕೆಟ್ ದರಗಳು ಆಗಸ್ಟ್ 1ರಿಂದ ಏರಿಕೆ

    ಬನ್ನೇರುಘಟ್ಟ ಉದ್ಯಾನವನ ಟಿಕೆಟ್ ದರ ಪರಿಷ್ಕರಣೆ: ಟಿಕೆಟ್ ದರಗಳು ಆಗಸ್ಟ್ 1ರಿಂದ ಏರಿಕೆ

    ಬೆಂಗಳೂರು:ಬನ್ನೇರುಘಟ್ಟ ಜೈವಿಕ ಉದ್ಯಾನವನವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ವಾರಾಂತ್ಯದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಂದಿ ಈ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ,ಇದೀಗ, ಪ್ರವಾಸಿಗರಿಗೆ ಸರ್ಕಾರ ಶಾಕ್​ ನೀಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವದ ಪ್ರವೇಶ ಶುಲ್ಕವನ್ನು ಸರ್ಕಾರ ಏರಿಕೆ ಮಾಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ (BBP) ಆಡಳಿತ ಮಂಡಳಿಯು ಮೃಗಾಲಯ ಪ್ರವೇಶದ ಟಿಕೆಟ್ ದರಗಳನ್ನು ಪರಿಷ್ಕರಿಸಿದ್ದು, ಹೊಸ ದರಗಳು ಆಗಸ್ಟ್ 1, 2025ರಿಂದ ಜಾರಿಗೆ ಬರುವುದಾಗಿ ತಿಳಿಸಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯಸೇನ್ ತಿಳಿಸಿದ್ದಾರೆ. ಪ್ರಾಣಿ ಆಹಾರ, ನಿರ್ವಹಣೆ, ಇಂಧನ ವೆಚ್ಚ ಮತ್ತು ಸಿಬ್ಬಂದಿ ವೇತನದಲ್ಲಿ ನಡೆದ ಹೆಚ್ಚಳದಿಂದ ದರ ಪರಿಷ್ಕರಣೆ ಅಗತ್ಯವಾಯಿತು.ಬಿಬಿಪಿ ಸ್ವಾಯತ್ತ ಸಂಸ್ಥೆಯಾಗಿದ್ದು, ಪ್ರವಾಸಿಗರಿಂದ ಬರುವ ಟಿಕೆಟ್ ಹಣವೇ ಅದರ ಪ್ರಮುಖ ಆದಾಯವಾಗಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ. ಮೃಗಾಲಯ ಪ್ರಾಧಿಕಾರ ಶೇಕಡಾ 50ರಷ್ಟು ದರ ಏರಿಕೆಗೆ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಶೇಕಡಾ 20ರಷ್ಟು ಮಾತ್ರ ಅನುಮೋದನೆ ಲಭಿಸಿದೆ.ಮೃಗಾಲಯ ಹಾಗೂ ಚಿಟ್ಟೆ ಉದ್ಯಾನವನದ ಕಾಂಬೋ ಟಿಕೆಟ್‌ಗಳ ದರಗಳೂ ಪರಿಷ್ಕೃತವಾಗಿದ್ದು, ವಯಸ್ಕರಿಗೆ ₹90, ಮಕ್ಕಳಿಗೆ ₹70 ಮತ್ತು ಹಿರಿಯ ನಾಗರಿಕರಿಗೆ ₹100 ನಿಗದಿಯಾಗಿದೆ. ಆದರೆ, ಸಫಾರಿ ಮತ್ತು ಚಿಟ್ಟೆ ಉದ್ಯಾನವನ ಪ್ರವೇಶದ ಟಿಕೆಟ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Advertisement

    ನೂತನ ಟಿಕೆಟ್ ದರಗಳು (ಆ.1, 2025ರಿಂದ ಜಾರಿಗೆ)

    ಮೃಗಾಲಯ ಪರಿಷ್ಕತ ದರ

    ವಯಸ್ಕರರು;₹120

    ಮಕ್ಕಳು;₹60

    ಹಿರಿಯ ನಾಗರಿಕರು;₹70

    ಚಿಟ್ಟೆಗಳ ಪಾರ್ಕ್‌ ಪ್ರವೇಶ ದರ

    ವಯಸ್ಕರರು;₹50

    ಮಕ್ಕಳಿಗೆ;₹30

    ಹಿರಿಯ ನಾಗರಿಕರಿಗೆ;₹30

    ಮೃಗಾಲಯ ಮತ್ತು ಚಿಟ್ಟೆ ಪಾರ್ಕ್ ಎರಡೂ ಸೇರಿ

    ವಯಸ್ಕರರು;₹170

    ಮಕ್ಕಳಿಗೆ;₹90

    ಹಿರಿಯ ನಾಗರಿಕರು;₹100

    ಇತಿಹಾಸದ ಅತ್ಯಂತ ದುಬಾರಿ ಭೂಸರ್ವೇಕ್ಷಣಾ ಉಪಗ್ರಹ ನಿಸಾರ್ ಇಂದು ಬಾಹ್ಯಾಕಾಶದತ್ತ ಹಾರಾಟ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading