ಬೆಂಗಳೂರು: ಗೃಹಸಚಿವ ಡಾ.ಪರಮೇಶ್ವರ್ ಅವರು ಸಭೆ ನಡೆಸಿದರೆ ಆಕಾಶ ಕೆಳಗೆ ಬೀಳುತ್ತದೆಯೇ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಸಚಿವರು ಸಭೆಗೆ ಆಹ್ವಾನ ನೀಡಿದರೆ ನಾವು ಹೋಗುತ್ತೇವೆ. ಹೈಕಮಾಂಡ್ ತಡೆಯೊಡ್ಡಿದ್ದ ಸಭೆಯ ವಿಚಾರವೇ ಬೇರೆ, ದಲಿತ ಶಾಸಕರ ಸಭೆಯೇ ಬೇರೆ ಎಂದು ಹೇಳಿದರು.
ನಾವು ಸಭೆ ನಡೆಸಿದರೆ ಆಕಾಶ ಕೆಳಗೆ ಬೀಳುತ್ತದೆಯೇ? ಬೇರೆಯವರು ಸಭೆಯನ್ನು ನಡೆಸುವುದಿಲ್ಲವೇ? ನಾವು ಸಭೆ ನಡೆಸಿದರೆ ಮಾತ್ರ ಸಮಸ್ಯೆಯೇ? ನಮ್ಮ ಸಮಸ್ಯೆ ಪರಿಹಾರಕ್ಕಾಗಿ ಸಭೆಯನ್ನು ಕರೆದಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಪ್ರಸ್ತಾಪಿಸಿದ ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ಬಂಧಿರಬಹುದು. ಆಗಲೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಿದ್ದೆವು. ಈಗ ಸಾಕ್ಷ್ಯಾಧಾರಗಳು ಇಲ್ಲ ಎಂದು ಪ್ರಕರಣ ಮುಕ್ತಾಯಗೊಂಡಿರುವ ಸಾಧ್ಯತೆಯೂ ಇದೆ. ಇಲ್ಲದೆಯೂ ಇರಬಹುದು. ಸಾಕ್ಷಿಗಳಿಲ್ಲದೆ ಮುಂದುವರೆಯಲು ಆಗದು. ಆರೋಪ ಸಾಬೀತು ಪಡಿಸಲು ರಾಜಣ್ಣ ಅವರಿಗೆ ಆಗದೆ ಇರಬಹುದು ಎಂದರು.
ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಪ್ರತಿಭಟನೆ ಮಾಡಲು ನಗರಕ್ಕೆ ಬರುತ್ತಿದ್ದಾರೆ. ಅವರು ಚುನಾವಣಾ ಅಕ್ರಮದ ಬಗ್ಗೆ ಆರೋಪ ಮಾಡಿದ್ದರು. ಮುಂದೆ ಆಗದಂತೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಾಗಬೇಕಾಗಿದೆ. ಚುನಾವಣೆ ಎದುರಾದಾಗ ಯಾವ ರೀತಿ ಎಂಬುದನ್ನು ನೋಡಬೇಕಿದೆ. ಈಗಲೇ ಏನೂ ಹೇಳಲು ಆಗುವುದಿಲ್ಲ. ರಾಘವೇಂದ್ರ ಹಿಟ್ನಾಳ್ ಅವರು ಕೆಎಂಎಫ್ ವಿಚಾರವಾಗಿ ತಮ್ಮನ್ನು ಭೇಟಿ ಮಾಡಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆಟೋ ಪ್ರಯಾಣ ಈಗ ಇನ್ನಷ್ಟು ದುಬಾರಿ: ಬೆಂಗಳೂರಿನಲ್ಲಿ ನಾಳೆಯಿಂದ ಹೊಸ ದರಗಳು ಜಾರಿ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


