Thursday, September 3, 2026
spot_img
More
    spot_img
    HomeEntertainmentಯುವ ರಾಜ್‌ಕುಮಾರ್‌ ಜತೆಗಿನ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಸಪ್ತಮಿ ಗೌಡ!

    ಯುವ ರಾಜ್‌ಕುಮಾರ್‌ ಜತೆಗಿನ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಸಪ್ತಮಿ ಗೌಡ!

    ಅಣ್ಣಾವ್ರ ಕುಟುಂಬದ ಕುಡಿ ಯುವ ರಾಜ್‌ಕುಮಾರ್‌ ನಟನೆಯ ಯುವ ಚಿತ್ರಕ್ಕೆ ಅಭಿಮಾನಿಗಳ ಭರ್ಜರಿ ಬೆಂಬಲ ಸಿಕ್ಕಿತ್ತು. ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡ ಚಿತ್ರ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಇನ್ನು ಈ ಚಿತ್ರದಲ್ಲಿ ಕಾಂತಾರ ಯಶಸ್ಸಿನಲ್ಲಿ ತೇಲುತ್ತಿದ್ದ ನಟಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

    Advertisement

    ಆದರೆ ಯುವ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಯುವ ರಾಜ್‌ಕುಮಾರ್‌ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿಗೆ ಇದೇನಾಯ್ತು ಎಂದು ವೀಕ್ಷಕರು ಸುದ್ದಿ ಕೇಳಿ ಗೊಂದಲಕ್ಕೊಳಗಾಗಿದ್ದರು.

    ಇನ್ನು ವಿಚ್ಛೇದನಕ್ಕೆ ಕಾರಣ ನೀಡಿದ್ದ ಶ್ರೀದೇವಿ ಭೈರಪ್ಪ ಯುವ ರಾಜ್‌ಕುಮಾರ್‌ ಹಾಗೂ ನಟಿ ಸಪ್ತಮಿ ಗೌಡ ನಡುವೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದರು. ಇನ್ನು ಶ್ರೀದೇವಿ ಭೈರಪ್ಪ ಮಾಡಿದ ಈ ಆರೋಪಕ್ಕೆ ನಟಿ ಸಪ್ತಮಿ ಗೌಡ ಆಗಲಿ ಅಥವಾ ಯುವ ರಾಜ್‌ಕುಮಾರ್‌ ಆಗಲಿ ಒಮ್ಮೆಯೂ ಪ್ರತಿಕ್ರಿಯಿಸಲಿಲ್ಲ.

    ಸದ್ಯ ಯುವ ರಾಜ್‌ಕುಮಾರ್‌ ತಮ್ಮ ಎರಡನೇ ಚಿತ್ರ ಎಕ್ಕ ಬಿಡುಗಡೆಗೆ ಕಾಯುತ್ತಿದ್ದು, ಅತ್ತ ಸಪ್ತಮಿ ಗೌಡ ತೆಲುಗಿನ ಕಡೆ ಮುಖ ಮಾಡಿದ್ದಾರೆ. ನಿತಿನ್‌ ನಟನೆಯ ತಮ್ಮುಡು ಚಿತ್ರದಲ್ಲಿ ನಟಿಸುತ್ತಿರುವ ಸಪ್ತಮಿ ಗೌಡ ತೆಲುಗು ಫಿಲ್ಮಿಬೀಟ್‌ನ ರಾಜಾ ಬಾಬು ಎಂಬುವವರು ನಡೆಸಿದ ಸಂದರ್ಶನದಲ್ಲಿ ಮಾತನಾಡಿ ತೆಲುಗು ಚಿತ್ರರಂಗ, ಕನ್ನಡ ಚಿತ್ರರಂಗ ಹಾಗೂ ಯುವ ವಿವಾದದ ಬಗ್ಗೆಯೂ ಮಾತನಾಡಿದರು ಎಂದು ವರದಿಯಾಗಿದೆ.

    ʼಯುವ ರಾಜ್‌ಕುಮಾರ್‌ ವಿಷಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಅಂತರ್ಜಾಲದಲ್ಲಿ ಹರಿದಾಡಿದ್ದವು. ಆದರೆ ಪ್ರಕರಣ ಇನ್ನೂ ಕೋರ್ಟ್‌ನಲ್ಲಿದ್ದು, ಮುಂದೆ ಏನಾಗಲಿದೆಯೋ ಎಲ್ಲವೂ ಗೊತ್ತಾಗಲಿದೆ. ಆಗ ನಾನು ಈ ಬಗ್ಗೆ ಮಾತನಾಡುತ್ತೇನೆʼ ಎಂದಿದ್ದಾರೆ.

    ಶ್ರೀದೇವಿ ಭೈರಪ್ಪ ಮಾಡಿದ ಈ ಗಂಭೀರ ಆರೋಪದ ವಿರುದ್ಧ ನಟಿ ಸಪ್ತಮಿ ಗೌಡ ಮಾನನಷ್ಟ ಮೊಕದ್ದಮೆ ದಾಖಲಿಸಿ ಕೋರ್ಟ್‌ ಮೆಟ್ಟಿಲೇರಿದ್ದರು.

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿEkka: ಯುವರಾಜ್‌ಕುಮಾರ್‌ ʼಎಕ್ಕʼ ಟ್ರೈಲರ್‌ ಬಿಡುಗಡೆ, ಪ್ರಿ ರಿಲೀಸ್‌ ಇವೆಂಟ್‌ ದಿನಾಂಕ ಘೋಷಣೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading