ಬೆಂಗಳೂರು: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತದ ಸೇನೆ ಆಪರೇಷನ್ ಸಿಂಧೂರ್ ನಡೆಸಿ ಪಾಕ್ನಲ್ಲಿನ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಈ ಸಮಯಲ್ಲಿ ಭಾರತ ಸರ್ಕಾರ ಪಾಕಿಸ್ತಾನ ಮೂಲದ ನ್ಯೂಸ್ ಚಾನೆಲ್ಗಳು, ಯುಟ್ಯೂಬ್ ಚಾನೆಲ್ಗಳು, ಸೆಲೆಬ್ರಿಟಿ ಹಾಗೂ ಕ್ರಿಕೆಟಿಗರ ಸಾಮಾಜಿಕ ಜಾಲತಾಣದ ಖಾತೆಗಳನ್ನು ಬ್ಯಾನ್ ಮಾಡಿತ್ತು.
ಏಪ್ರಿಲ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತ್ತು. ಆದರೆ ಈ ನಿಷೇಧವನ್ನು ಇದೀಗ ಕೇಂದ್ರ ಸರ್ಕಾರ ವಾಪಸ್ ಪಡೆದಿದ್ದು, ಬ್ಯಾನ್ ಆಗಿದ್ದ ಪಾಕ್ನ ಸುದ್ದಿ ವಾಹಿನಿಗಳು, ಯುಟ್ಯೂಬ್ ಚಾನೆಲ್ಗಳು ಹಾಗೂ ಸೆಲೆಬ್ರಟಿಗಳ ಖಾತೆಗಳು ಇದೀಗ ಮತ್ತೆ ಭಾರತದಲ್ಲಿ ಲಭ್ಯವಾಗಿವೆ.
ಹೀಗೆ ಕೇಂದ್ರ ಸರ್ಕಾರ ವಿಧಿಸಿದ್ದ ಬ್ಯಾನ್ ತೆರವಾಗಿರುವುದರ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಾಕ್ನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೆಸರಿನಲ್ಲಿ ಮೋದಿಗೆ ತೆಗಳಿರುವ ಇನ್ಸ್ಟಾಗ್ರಾಮ್ ಸ್ಟೋರಿ ಸಹ ವೈರಲ್ ಆಗಿದೆ. ಆಪರೇಷನ್ ಸಿಂಧೂರ್ ವೇಳೆ ಬ್ಯಾನ್ ಆದ ಖಾತೆಗಳ ಪೈಕಿ ಶಾಹಿದ್ ಅಫ್ರಿದಿ ಅವರ ಸಾಮಾಜಿಕ ಜಾಲತಾಣದ ಖಾತೆಗಳು ಹಾಗೂ ಯುಟ್ಯೂಬ್ ಚಾನೆಲ್ ಸಹ ಸೇರಿತ್ತು.
ಇದೀಗ ಶಾಹಿದ್ ಅಫ್ರಿದಿ ಖಾತೆ ಪುನಃ ಬಂದಿದ್ದು, ಎಕ್ಸ್ ಖಾತೆಯಲ್ಲಿ ಅಫ್ರಿದಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ʼಭಾರತ ಸರ್ಕಾರ ನನ್ನ ಖಾತೆಯ ಮೇಲೆ ಹೇರಿದ್ದ ನಿಷೇಧವನ್ನು ವಾಪಸ್ ಪಡೆದಿದೆ. ಪಹಲ್ಗಾಮ್ ದಾಳಿಯನ್ನು ಅವರ ದೇಶದವರೇ ಮಾಡಿದ್ದು ಎಂಬುದು ಅವರಿಗೆ ಅರಿವಾಗಿರಬೇಕು. ಭಾರತ ಸರ್ಕಾರಕ್ಕೆ ನನ್ನದೊಂದು ಸಲಹೆ. ಕಾಶ್ಮೀರದ ಸಮಸ್ಯೆ ಬಗೆಹರಿಯಬೇಕೆಂದರೆ ಕಾಶ್ಮೀರವನ್ನು ಪಾಕ್ಗೆ ಕೊಟ್ಟುಬಿಡಿ. ಮೊದಲು ನಮ್ಮ ಖಾತೆಗಳನ್ನು ಮಾಡಿ ಈಗ ತೆರೆದಿರುವ ಮೋದಿ ಎಂಥ ಕಿಡ್ʼ ಎಂದು ಬರೆದುಕೊಂಡಿದ್ದಾರೆ ಎಂಬ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆದರೆ ಅಸಲಿಯತ್ತೇನೆಂದರೆ ಇದೊಂದು ನಕಲಿ ಸ್ಕ್ರೀನ್ಶಾಟ್, ಶಾಹಿದ್ ಅಫ್ರಿದಿ ಖಾತೆ ಮೇಲಿನ ಬ್ಯಾನ್ ತೆರವಾಗಿರುವುದು ನಿಜ, ಆದರೆ ಅಫ್ರಿದಿ ಇಂತಹ ಸ್ಟೋರಿ ಬರೆದುಕೊಂಡಿಲ್ಲ. ಕಿಡಿಗೇಡಿಗಳು ನಕಲಿ ಸ್ಟೋರಿ ಸೃಷ್ಟಿಸಿದ್ದಾರೆ.
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಆಪರೇಷನ್ ಸಿಂಧೂರ್ ವೇಳೆ ಪಾಕ್ ಚಾನೆಲ್ಗಳ ಮೇಲೆ ಹೇರಿದ್ದ ನಿಷೇಧ ಹಿಂಪಡೆದ ಕೇಂದ್ರ ಸರ್ಕಾರ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


