ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ, ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ಆರೋಪಿಸಿ ದೂರು ನೀಡಿದ್ದ ಅನಾಮಿಕ ವ್ಯಕ್ತಿ ಸದ್ಯ ಎಸ್ಐಟಿ ಅಧಿಕಾರಿಗಳ ಜತೆ ತನಿಖೆಗೆ ಸಹಕರಿಸುತ್ತಿದ್ದಾನೆ.
ಮೊದಲಿಗೆ 13 ಸ್ಥಳಗಳನ್ನು ಗುರುತಿಸಿದ್ದ ಅನಾಮಿಕ ವ್ಯಕ್ತಿ ಈ ಜಾಗಗಳಲ್ಲಿ ಅಗೆದರೆ ಅಸ್ತಿಪಂಜರ ಸಿಗಲಿದೆ ಎಂದು ಹೇಳಿದ್ದ. ಅದರಂತೆ ಎಸ್ಐಟಿ ಅಧಿಕಾರಿಗಳು 10 ಪಾಯಿಂಟ್ಗಳಲ್ಲಿ ಗುಂಡಿ ಅಗೆಸಿದರಾದರೂ ಅಸ್ತಿಪಂಜರದ ಅವಶೇಷ ಪತ್ತೆಯಾದದ್ದು ಆರನೇ ಪಾಯಿಂಟ್ ಒಂದರಲ್ಲಿ ಮಾತ್ರ.
ಹೀಗೆ ಹತ್ತರಲ್ಲಿ ಒಂದರಲ್ಲಿ ಮಾತ್ರ ಮೂಳೆಗಳು ಸಿಕ್ಕಿದ್ದನ್ನು ಕಂಡ ಜನತೆ ಹಾಗೂ ಪ್ರಕರಣದ ವಿರೋಧಿಗಳು ಈ ಕೇಸ್ ವ್ಯರ್ಥ, ಇದೆಲ್ಲ ಕಾಲಹರಣ ಎಂದು ನಾಲಿಗೆ ಹರಿಬಿಟ್ಟಿದ್ದರು. ಆದರೆ 11ನೇ ಪಾಯಿಂಟ್ನಲ್ಲಿ ನಡೆದ ಕಾರ್ಯಾಚರಣೆ ಈ ಎಲ್ಲರ ಬಾಯಿಮುಚ್ಚಿಸಿದೆ. ಏಕೆಂದರೆ ಅಲ್ಲಿ ಬರೋಬ್ಬರಿ 4 ಮೃತದೇಹಗಳು ಪತ್ತೆಯಾಗಿವೆ ಎನ್ನಲಾಗುತ್ತಿದೆ.
ಈ ಪೈಕಿ ಒಂದು ಮಹಿಳೆಯ ಮೃತದೇಹವಾಗಿದ್ದು, ಇವುಗಳ ಜತೆ ಸೀರೆ ಸಹ ಲಭ್ಯವಾಗಿದೆ ಎನ್ನಲಾಗಿದೆ. ಇನ್ನು ಎಸ್ಐಟಿ ಅಧಿಕಾರಿಗಳು ಮೂರು ಕವರ್ ಮಾಡಲಾದ ಬಕೆಟ್ ಹಾಗೂ ಉದ್ದನೆಯ ಕವರ್ ಮಾಡಲಾದ ವಸ್ತುವನ್ನು ಹಿಡಿದು ವಾಪಸ್ಸಾಗಿದ್ದು, ದೊಡ್ಡ ಮಟ್ಟದಲ್ಲಿ ಅವಶೇಷಗಳು ಲಭ್ಯವಾಗಿವೆ ಎಂಬುದನ್ನು ಇದು ಹೇಳುತ್ತಿದೆ.
ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರಿಗೆ ಶಾಕ್: ರಜೆ ಹಾಗೂ ವಾರದ ರಜೆ ರದ್ದು
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


