ಬೆಳ್ತಂಗಡಿ: ಬುರುಡೆ ಪ್ರಕರಣ ಸಂಬಂಧ ಹೋರಾಟಗಾರ ಜಯಂತ್ ಟಿ ಅವರನ್ನು ಎಸ್ಐಟಿ ಇಂದು ಬೆಳಗಿನ ಜಾವದವರೆಗೂ ವಿಚಾರಣೆ ನಡೆಸಿ, ಹಲವು ಮಾಹಿತಿಗಳನ್ನು ಪಡೆದುಕೊಂಡಿದೆ.
ನಿನ್ನೆ ಸಂಜೆ ವಿಚಾರಣೆಗೆ ಜಯಂತ್ ಒಂದು ಬ್ಯಾಗ್ ಜೊತೆ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಹಾಜರಾದರು. ಎಸ್ಐಟಿ ಅಧಿಕಾರಿಗಳು ಇಂದು ಬೆಳಗಿನ ಜಾವ 2.30ರವರೆಗೂ ವಿಚಾರಣೆ ಮಾಡಿ, ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ವಾಪಸ್ ಕಳುಹಿಸಿದ್ದಾರೆ.
ಬೆಂಗಳೂರಿನ ಬಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಸಂದ್ರದ ಬಾಡಿಗೆ ಮನೆಯಲ್ಲಿ ವಾಸವಿರುವ ಜಯಂತ್ ಮನೆಯಲ್ಲಿ ಎಸ್ಐಟಿ ಇತ್ತೀಚೆಗೆ ಮಹಜರು ನಡೆಸಿ ಅವರ ಕುಟುಂಬ ಸದಸ್ಯರ ಮೊಬೈಲ್ಗಳನ್ನು ವಶಕ್ಕೆ ಪಡೆದಿದೆ. ಆ ಸಂದರ್ಭದಲ್ಲಿ ಜಯಂತ್ ಮನೆಯಲ್ಲಿರಲಿಲ್ಲ.
ಬುರುಡೆ ಚಿನ್ನಯ್ಯ ಮಲ್ಲಸಂದ್ರದ ಜಯಂತ್ ಟಿ ಅವರ ಮನೆಯಲ್ಲಿ ಎರಡು ದಿನ ಬುರುಡೆ ಜೊತೆ ತಂಗಿದ್ದನೆಂಬ ಮಾಹಿತಿ ಮೇರೆಗೆ ಅವರ ಮನೆ ಮಹಜರು ನಡೆಸಲಾಯಿತು.
ಮಾರನೇ ದಿನ ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ನಲ್ಲಿರುವ ಸರ್ವೀಸ್ ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ತಂಗಿದ್ದಾಗಿ ಚಿನ್ನಯ್ಯ ಹೇಳಿದ್ದರಿಂದ ಆ ಅಪಾರ್ಟ್ಮೆಂಟ್ನಲ್ಲೂ ಸಹ ಎಸ್ಐಟಿ ಮಹಜರು ನಡೆಸಿ ಅಲ್ಲಿನ ಸಿಬ್ಬಂದಿಯನ್ನು ವಿಚಾರಣೆ ಮಾಡಿ ಮಾಹಿತಿಯನ್ನು ಪಡೆದುಕೊಂಡಿದೆ.
ನಿನ್ನೆ ಸಂಜೆ ಜಯಂತ್ ಟಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಸೂಚಿಸಿದ್ದರಿಂದ ಬ್ಯಾಗ್ನಲ್ಲಿ ಕೆಲವೊಂದು ದಾಖಲಾತಿಗಳನ್ನು ಇಟ್ಟುಕೊಂಡು ವಿಚಾರಣೆಗೆ ಹಾಜರಾಗಿದ್ದರು.
ಧರ್ಮಸ್ಥಳ: ಬುರುಡೆ ವಿಡಿಯೊ ಮೊದಲಿಗೆ ಅಪ್ಲೋಡ್ ಮಾಡಿದ್ದ ಕೇರಳದ ಯುಟ್ಯೂಬರ್ಗೆ ನೋಟಿಸ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


