ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ, ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಯುತ್ತಿದ್ದು, ಸಾಕ್ಷಿ ದೂರುದಾರ ಗುರುತಿಸಿದ್ದ 13 ಸ್ಥಳಗಳನ್ನು ಕ್ರಮವಾಗಿ ಅಗೆದು ಪರಿಶೀಲನೆ ನಡೆಸಲಾಗುತ್ತಿದೆ.
ನಿನ್ನೆ ( ಆಗಸ್ಟ್ 5 ) 11ನೇ ಜಾಗ ಅಗೆಯುವ ಮುನ್ನ ನೇತ್ರಾವತಿ ಸ್ನಾನಘಟ್ಟದ ಕಾಡಿನೊಳಗೆ ಅಧಿಕಾರಿಗಳನ್ನು ಕರೆದೊಯ್ದ ಅನಾಮಿಕ ಬಂಗ್ಲ ಗುಡ್ಡದ ಮೇಲೆ ಒಂದು ಸ್ಥಳವನ್ನು ತೋರಿಸಿ ಅಲ್ಲಿ ಅಗೆಯಲು ತಿಳಿಸಿದ್ದ.
ಅದರಂತೆ ಅಲ್ಲಿ ಎರಡಕ್ಕೂ ಹೆಚ್ಚು ಅಸ್ತಿಪಂಜರ ಸಿಕ್ಕಿದವು ಎಂಬ ಮಾಹಿತಿ ಲಭ್ಯವಾಗಿದೆ. ಅದೇ ರೀತಿ ಇಂದು ( ಆಗಸ್ಟ್ 6 ) ಸಹ ಅನಾಮಿಕ 13ನೇ ಸ್ತಳ ಉತ್ಖನನ ಮಾಡುವ ಮುನ್ನ ಅದೇ ಬಂಗ್ಲ ಗುಡ್ಡಕ್ಕೆ ಕರೆದೊಯ್ದಿದ್ದಾನೆ.
ಹೀಗಾಗಿ ನಿನ್ನೆಯ ಹಾಗೆ ಇಂದೂ ಸಹ ಬಂಗ್ಲ ಗುಡ್ಡದಲ್ಲಿ ಹಲವು ಅಸ್ತಿಪಂಜರ ದೊರಕಲಿದೆಯಾ ಎಂಬ ಪ್ರಶ್ನೆ ಹಾಗೂ ಕುತೂಹಲ ಮೂಡಿದೆ.
ಮಳೆಗಾಲದ ಚಹಾ ಸಮಯಕ್ಕೆ ಪರ್ಫೆಕ್ಟ್ ಸ್ನ್ಯಾಕ್: ಹಿತಕಿದ ಅವರೆಕಾಳಿನ ಮಿಕ್ಸ್ಚರ್!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


