Wednesday, August 5, 2026
spot_img
More
    spot_img
    HomeInternationalಭಾರತದಲ್ಲಿ ಮತಗಳ್ಳತನಕ್ಕೆ ನನ್ನ ಫೋಟೊ ಬಳಸಿದ್ದಾರೆ : ರಾಹುಲ್‌ ಗಾಂಧಿ ಹೇಳಿದ್ದು ನಿಜ ಎಂದ ಬ್ರೆಜಿಲ್‌...

    ಭಾರತದಲ್ಲಿ ಮತಗಳ್ಳತನಕ್ಕೆ ನನ್ನ ಫೋಟೊ ಬಳಸಿದ್ದಾರೆ : ರಾಹುಲ್‌ ಗಾಂಧಿ ಹೇಳಿದ್ದು ನಿಜ ಎಂದ ಬ್ರೆಜಿಲ್‌ ಮಾಡೆಲ್; ವಿಡಿಯೊ

    ಬಿಜೆಪಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಅಕ್ರಮವಾಗಿ ಮತಗಳನ್ನು ಚಲಾಯಿಸಿದೆ ಎಂದು ʼವೋಟ್‌ ಚೋರ್‌ʼ ಅಭಿಯಾನ ಮಾಡುತ್ತಿರುವ ರಾಹುಲ್‌ ಗಾಂಧಿ ಸಾಕ್ಷಿ ಸಮೇತ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

    Advertisement

    ಆದರೆ ಚುನಾವಣಾ ಆಯೋಗ ಮಾತ್ರ ರಾಹುಲ್‌ ಗಾಂಧಿ ಆರೋಪವನ್ನು ನಿರಾಕರಿಸಿದ್ದು ಯಾವುದೇ ಮತಗಳ್ಳತನ ನಡೆದಿಲ್ಲ ಎಂದಿತ್ತು. ನಿನ್ನೆ ( ನವೆಂಬರ್‌ 5 ) ಸಹ ರಾಹುಲ್‌ ಗಾಂಧಿ ಪತ್ರಿಕಾಗೋಷ್ಟಿಯನ್ನು ನಡೆಸಿ ಹರಿಯಾಣದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ್ದರು.

    ಬ್ರೆಜಿಲ್‌ನ ಮಾಡೆಲ್‌ ಒಬ್ಬರ ಫೋಟೊವನ್ನು ಬಳಕೆ ಮಾಡಿ 25 ಕಡೆ ಮತ ಚಲಾಯಿಸಲಾಗಿದೆ ಎಂದು ಆರೋಪಿಸಿದ್ದ ರಾಹುಲ್‌ ಗಾಂಧಿ ಆಕೆಯ ಫೋಟೊವನ್ನೂ ಸಹ ಹಂಚಿಕೊಂಡಿದ್ದರು. ಆದರೆ ಈ ಆರೋಪವನ್ನು ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು, ನಕಲಿ ಫೋಟೊ ಎಂದಿದ್ದರು.

    ಆದರೆ ಇದೀಗ ಸ್ವತಃ ಆ ಮಾಡೆಲ್‌ ರಾಹುಲ್‌ ಗಾಂಧಿ ಮಾಡಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಲರಿಸ್ಸಾ ಎಂಬ ಮಾಡೆಲ್‌ ಈ ಕುರಿತು ವಿಡಿಯೊ ಮಾಡಿದ್ದು, ಪೋರ್ಚುಗಲ್‌ ಭಾಷೆಯಲ್ಲಿ ಮಾತನಾಡಿದ್ದಾರೆ. ʼಸ್ನೇಹಿತರೇ ನಿಮಗೆ ನಾನೊಂದು ಜೋಕ್‌ ಹೇಳುತ್ತೇನೆ. ಅದು ಅತಿ ಭಯಂಕರವಾಗಿದೆ. ನನ್ನ ಹಳೆಯ ಫೋಟೊವನ್ನು ಭಾರತದಲ್ಲಿ ಮತ ಚಲಾಯಿಸಲು ಬಳಸುತ್ತಿದ್ದಾರೆ. ನನ್ನನ್ನು ಭಾರತೀಯಳೆಂದು ಬಿಂಬಿಸಿದ್ದಾರೆ. ನನ್ನ ಫೋಟೊ ಇಟ್ಟುಕೊಂಡು ಕಿತ್ತಾಡುತ್ತಿದ್ದಾರೆ. ನೋಡಿ ಎಂತಹ ಹುಚ್ಚುತನ, ಎಂತಹ ಗೊಂದಲದಲ್ಲಿ ನಾನು ಬದುಕುತ್ತಿದ್ದೇನೆ. ಓರ್ವ ಪತ್ರಕರ್ತ ನನ್ನ ಕಚೇರಿಗೆ ಕರೆ ಮಾಡಿ ನನ್ನ ಜತೆ ಮಾತನಾಡಲು ಯತ್ನಿಸಿದ್ದಾರೆ. ಇದಕ್ಕೆ ನಾನು ಪ್ರತಿಕ್ರಿಯಿಸದೇ ಕಚೇರಿಯವರಿಗೆ ನನ್ನ ಮೊಬೈಲ್‌ ನಂಬರ್‌ ಕೊಡಬೇಡಿ ಎಂದೆ. ಆದರೂ ಬಿಡದ ಆತ ನನ್ನ ಇನ್ಸ್ಟಾಗ್ರಾಮ್‌ ಪತ್ತೆ ಹಚ್ಚಿ ಅಲ್ಲಿ ಕರೆ ಮಾಡಿದ್ದಾರೆ. ಬೇರೆ ನಗರದ ನನ್ನ ಸ್ನೇಹಿತನೋರ್ವ ನನಗೆ ಆ ಫೋಟೊವನ್ನು ಕಳುಹಿಸಿದ್ದಾನೆ ನೋಡಿʼ ಎಂದು ಹೇಳಿ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ರಾಹುಲ್‌ ಗಾಂಧಿ ಹೇಳಿದ ಹಾಗೆ ಆ ಫೋಟೊ ತನ್ನದೇ ಎಂದು ಬ್ರೆಜಿಲ್‌ ಮಾಡೆಲ್‌ ಹೇಳಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading