Sunday, September 20, 2026
spot_img
More
    spot_img
    HomeStateDistrictಇದು ನನ್ನ ಏರಿಯಾ ಇಲ್ಲಿ ಕನ್ನಡ ಬಾವುಟ ಹಾಕಬೇಡ: ಕಾರವಾರದಲ್ಲಿ ಕನ್ನಡ ಧ್ವಜದ ವಿರುದ್ಧ ಕಿಡಿಕಾರಿದ...

    ಇದು ನನ್ನ ಏರಿಯಾ ಇಲ್ಲಿ ಕನ್ನಡ ಬಾವುಟ ಹಾಕಬೇಡ: ಕಾರವಾರದಲ್ಲಿ ಕನ್ನಡ ಧ್ವಜದ ವಿರುದ್ಧ ಕಿಡಿಕಾರಿದ ಸೊಕ್ಕಿನ ಮಹಿಳೆ; ವಿಡಿಯೊ

    ಕಾರವಾರ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಬಾವುಟ ಹಾರಿಸಿ ಸಂಭ್ರಮಿಸುವುದು ಕರ್ನಾಟಕದಲ್ಲಿ ಸರ್ವೇಸಾಮಾನ್ಯ. ರಾಷ್ಟ್ರಧ್ವಜವನ್ನು ಹೇಗೆ ಗೌರವಿಸುತ್ತಾರೋ ಅದೇ ರೀತಿ ಕನ್ನಡಿಗರು ತಮ್ಮ ರಾಜ್ಯದ ಧ್ವಜವನ್ನೂ ಸಹ ಪ್ರೀತಿ ಹಾಗೂ ಗೌರವದಿಂದ ಕಾಣುತ್ತಾರೆ. ರಾಜ್ಯೋತ್ಸವದಂದು ಕಚೇರಿಗಳಲ್ಲಿ ಮಾತ್ರವಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಹಾರಿಸಿ ತಮ್ಮ ಅಭಿಮಾನವನ್ನು ಹೊರಹಾಕುತ್ತಾರೆ.

    Advertisement

    ಆದರೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮಹಿಳೆಯೋರ್ವಳು ಸಾರ್ವಜನಿಕ ಸ್ಥಳದಲ್ಲಿ ಕನ್ನಡ ಧ್ವಜ ಹಾಕಲು ಹೋದಾಗ ಸೊಕ್ಕಿನಿಂದ ಇಲ್ಲಿ ಹಾಕಬೇಡ ಎಂದು ಕನ್ನಡಿಗರಿಗೆ ಅವಮಾನ ಮಾಡಿದ ಘಟನೆ ನಡೆದಿದೆ. ಸಂಜೆವಾಣಿ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದು ನನ್ನ ಏರಿಯಾ ಇಲ್ಲಿ ಹಾಕಬೇಡ ಎಂದು ಮಹಿಳೆ ಕಿಡಿಕಾರಿದ್ದಾಳೆ.

    ಈ ಹಿಂದೆಯೂ ಒಬ್ಬನಿಗೆ ಬೈದು ಕಳುಹಿಸಿದ್ದೆ, ನಿನಗೂ ಹೇಳುತ್ತಿದ್ದೇನೆ ಇಲ್ಲಿ ಹಾಕಬೇಡ ಎಂದು ಹೇಳಿದ್ದಾಳೆ. ಇತ್ತ ಕನ್ನಡ ಬಾವುಟ ಹಾಕಲು ಹೋಗಿದ್ದ ವ್ಯಕ್ತಿ ಜಾಗದ ಮಾಲೀಕರ ಬಳಿ ಮಾತನಾಡಿ ಆಗಿದೆ ಎಂದು ಹೇಳಿದರೂ ಸಹ ಕೇಳದ ಆಕೆ ಯಾವುದೇ ಕಾರಣಕ್ಕೂ ಇಲ್ಲಿ ಮಾತ್ರ ಕನ್ನಡ ಬಾವುಟ ಹಾಕಬೇಡ, ಬೇರೆ ಎಲ್ಲಾದರೂ ಹಾಕು ಎಂದು ಹೇಳಿದ್ದಾಳೆ.

    ಇನ್ನು ಆಕೆಯ ಮಾತಿನಲ್ಲಿ ಕನ್ನಡತನದ ವಿರೋಧಿ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತಿದ್ದು, ಕನ್ನಡ ಧ್ವಜದ ವಿರುದ್ಧ ಇರುವ ದ್ವೇಷ ಎದ್ದು ಕಾಣುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಬಾವುಟ ಹಾಕಬೇಡ ಎಂದು ಹೇಳಲು ಇವಳಿಗೆ ಹಕ್ಕೇನು ಎಂದು ನೆಟ್ಟಿಗರು ಪ್ರಶ್ನಿಸಿದ್ದು, ಬೇರೆಯವರ ಜಾಗದಲ್ಲಿ ಬಾಡಿಗೆಗೆ ಇರುವ ಈಕೆ ಈ ಜಾಗದಲ್ಲೆಲ್ಲೂ ಕನ್ನಡ ಬಾವುಟ ಹಾಕಲು ಬಿಡುವುದಿಲ್ಲ ಎಂದು ಹೇಳಿದ್ದನ್ನು ಕಂಡು ಕಿಡಿಕಾರಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading