ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಬದಲಾವಣೆ ಕೂಗು ಶಾಸಕರಿಂದಲೇ ಬಂದ ಕೂಡಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿದ್ದು, ಎಲ್ಲ ಶಾಸಕರು ಹಾಗೂ ಮಂತ್ರಿಗಳ ಜತೆ ಚರ್ಚೆ ನಡೆಸಿದ್ದಾರೆ.
ಇನ್ನು ಸುರ್ಜೇವಾಲ ಅವರು ಶಾಸಕರು ಹಾಗೂ ಸಚಿವರ ಕೆಲಸದ ವೈಖರಿಯ ಕುರಿತು ವರದಿ ರಚಿಸಲು ಆಗಮಿಸಿದ್ದಾರೆ ಎಂದರೆ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಿಎಂ ಬದಲಾವಣೆಗಾಗಿಯೇ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಕಾಲೆಳೆದಿದ್ದಾರೆ.
ಇತ್ತ ನಿಖಿಲ್ ಕುಮಾರಸ್ವಾಮಿ ಸುರ್ಜೇವಾಲ ಆಗಮನದ ಕುರಿತು ಪ್ರತಿಕ್ರಿಯಿಸಿ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ ಎಂದು ವ್ಯಂಗ್ಯವಾಡಿದ್ದರು. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ ನಿಖಿಲ್ ಕುರಿತ ಪ್ರಶ್ನೆ ಕೇಳುತ್ತಿದ್ದಂತೆಯೇ ʼಬಹಳ ದೊಡ್ಡವರಾಗಿಬಿಟ್ಟವ್ರೆ ಅವ್ರು. ಅವರ ಜೊತೆ ಮಾತನಾಡೋಕಾಗುತ್ತಾ?ʼ ಎನ್ನುತ್ತಾ ವ್ಯಂಗ್ಯವಾಡಿ ನಿಖಿಲ್ಗೆ ತಿರುಗೇಟು ನೀಡಿದರು.
ಇನ್ನು ನಿಖಿಲ್ ಮಂಡ್ಯದಲ್ಲಿ ಮಾತನಾಡಿ ನಮ್ಮ ಶಾಸಕರಾರು ಪಕ್ಷ ಬಿಟ್ಟು ಹೋಗುವುದಿಲ್ಲ, ಎಲ್ಲರೂ ನಮ್ಮಲ್ಲಿಯೇ ಇರುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೂ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ ನಾವು ಅವರನ್ನು ಕರೆದೇ ಇಲ್ಲವಲ್ಲಾ, ನಾವೇನಾದರೂ ಕರೆದಿದ್ವಾ? ಎಂದು ಪ್ರಶ್ನೆ ಹಾಕಿ ಮತ್ತೆ ನಿಖಿಲ್ ಕಾಲೆಳೆದರು. ನಮ್ಮ ಬಳಿ 138 ಶಾಸಕರಿದ್ದಾರೆ, ಸರ್ಕಾರ ರಚನೆಗೇನು ಅಗತ್ಯವಿಲ್ಲ, ಸ್ವ ಇಚ್ಛೆಯಿಂದ ಬರುತ್ತೇವೆ ಎಂದರೆ ಬನ್ನಿ ಎನ್ನುತ್ತೇವೆ ಎಂದೂ ಸಹ ಟಾಂಗ್ ಕೊಟ್ಟರು.
ಪಹಲ್ಗಾಮ್ ದಾಳಿ ನಂತರ ಜಮ್ಮು-ಕಾಶ್ಮೀರ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


