ಮೈಸೂರು: ಸರ್ಕಾರಿ ಉದ್ಯೋಗಿ ಯುವಕನನ್ನು ಬಂಧಿಸಿರುವ ಜಯಪುರ ಠಾಣಾ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡ ವಂಚಕನೋರ್ವ, ಆಕೆಯ ಬಳಿ ಇದ್ದ 500 ಗ್ರಾಂ ಚಿನದ ಆಭರಣಗಳು ಹಾಗೂ 10.50 ರೂ.ಗಳನು ಲಪಟಾಯಿಸಿರುವ ಘಟನೆ
ನಡೆದಿದೆ.
ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಹಾಗೂ ವಿಜಯನಗರದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಗೆ ಫೇಸ್ ಬುಕ್ ಮೂಲಕ ತಿರುವಂತಪುರಂ ಮೂಲದ ವೈದ್ಯ ಡಾ.ಎ.ಎಂ.ಶಿವಕುಮಾರ್ ಪರಿಚಯವಾಗಿ
ದ್ದಾನೆ.
ನಂತರ ಆತ್ಮೀಯನಂತೆ ನಟಿಸಿದ ವಂಚಕ ಮಹಿಳೆಯ ಮನೆಗೆ ಆಗಾಗ್ಗೆ ಬರುತ್ತಿದ್ದ. ಈ ನಡುವೆ ಒಂಟಿಯಾಗಿರುವ ನೀವು ಚಿನ್ನಾಭರಣವನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಡಿ. ಬ್ಯಾಂಕ್ನ ಲಾಕರ್ನಲ್ಲಿ ಇಡಿ ಎಂದು ಹೇಳಿ ಆತನೇ ಬ್ಯಾಂಕ್ಗೆ ಕರೆದೊಯ್ದು ಲಾಕರ್ನಲ್ಲಿ ಚಿನ್ನಾಭರಣ ಗಳನ್ನು ಇರಿಸುವಂತೆ ನಾಟಕವಾಡಿ ನಕಲಿ ಕೀಲಿಯನ್ನು ನೀಡಿದ್ದಾನೆ.
ನಂತರ ನಿಮ್ಮ ಬಳಿ ಇರುವ ಹಣವನ್ನು ವ್ಯಾಪಾರ ದಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಗಳಿಸಬಹುದು ಎಂದು ಆಸೆ ಹುಟ್ಟಿಸಿ ಆಕೆಯ ಬಳಿ ಇದ್ದ 10.50 ಲಕ್ಷ ರೂ.ಗಳನ್ನು ಪಡೆದಿದ್ದಾನೆ.
ಈ ನಡುವೆ ತಾನು ಲಾಕರ್ನಲ್ಲಿ ಇಟ್ಟಿದ್ದ ವಜ್ರದ ಉಂಗುರ ಆತನ ಕೈಲಿ ಇದ್ದುದನ್ನು ಗಮನಿಸಿದ ಮಹಿಳೆ ‘ನಾನು ಲಾಕರ್ನಲ್ಲಿ ಇಟ್ಟಿದ್ದ ಉಂಗುರ ನಿನ್ನ ಕೈಲಿ ಹೇಗೆ ಬಂತು’ ಎಂದು ದಬಾಯಿಸಿ, ನನ್ನ ಚಿನ್ನಾಭರಣ ಹಾಗೂ ಹಣವನ್ನು ವಾಪಸ್ ಕೊಡು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಆತನೇ ಆಕೆಯ ಮೇಲೆ ಹರಿಹಾಯ್ದಿದ್ದಾನೆ.
ತಾನು ವಂಚನೆಗೆ ಒಳಗಾಗಿರುವುದು ಆಕೆಗೆ ಗೊತ್ತಾಗಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಡಿ ಬಾಸ್ ಕೈನಲ್ಲಿನ ಮೊಬೈಲ್ ಬೆಲೆ ಕಂಡು ಹೌಹಾರಿದ ನೆಟ್ಟಿಗರು
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


