ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಯೆಲ್ಲೋ ಅಲರ್ಟ್ ಘೋಷಣೆ
ಹವಾಮಾನ ಇಲಾಖೆಯ ಪ್ರಕಾರ, ಇಂದು ಮತ್ತು ನಾಳೆ ಅಂದರೆ ಸೆಪ್ಟೆಂಬರ್ 18 ರವರೆಗೆ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ:
ದಕ್ಷಿಣ ಒಳನಾಡು: ಮೈಸೂರು, ಮಂಡ್ಯ, ಕೊಡಗು ಮತ್ತು ಹಾಸನ.
ಉತ್ತರ ಒಳನಾಡು: ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ, ಬೀದರ್, ಬೆಳಗಾವಿ, ಬಾಗಲಕೋಟೆ ಮತ್ತು ಉತ್ತರ ಕನ್ನಡ.
ಕರಾವಳಿ ಜಿಲ್ಲೆಗಳು: ಉಡುಪಿ ಮತ್ತು ದಕ್ಷಿಣ ಕನ್ನಡ.
ಬೆಂಗಳೂರಿನಲ್ಲಿ ಕೂಡ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.
ಹವಾಮಾನ ಮುನ್ಸೂಚನೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ನೀಡಿರುವ ಮಾಹಿತಿಯ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉಳಿದ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಉಷ್ಣಾಂಶದ ವಿವರಗಳು
ಎಚ್ಎಎಲ್: ಗರಿಷ್ಠ ಉಷ್ಣಾಂಶ 29.0°C ಮತ್ತು ಕನಿಷ್ಠ ಉಷ್ಣಾಂಶ 20.6°C.
ಬೆಂಗಳೂರು ನಗರ: ಗರಿಷ್ಠ ಉಷ್ಣಾಂಶ 28.5°C ಮತ್ತು ಕನಿಷ್ಠ ಉಷ್ಣಾಂಶ 21.3°C.
ಕೆಐಎಎಲ್ (ಏರ್ಪೋರ್ಟ್): ಗರಿಷ್ಠ ಉಷ್ಣಾಂಶ 30.4°C.
ಜಿಕೆವಿಕೆ: ಗರಿಷ್ಠ ಉಷ್ಣಾಂಶ 28.8°C ಮತ್ತು ಕನಿಷ್ಠ ಉಷ್ಣಾಂಶ 20.0°C.
ಕರಾವಳಿ ಮತ್ತು ಇತರೆ ಜಿಲ್ಲೆಗಳಲ್ಲಿ ಉಷ್ಣಾಂಶ
ಹೊನ್ನಾವರ: ಗರಿಷ್ಠ ಉಷ್ಣಾಂಶ 29.4°C ಮತ್ತು ಕನಿಷ್ಠ ಉಷ್ಣಾಂಶ 23.1°C.
ಕಾರವಾರ: ಗರಿಷ್ಠ ಉಷ್ಣಾಂಶ 28.8°C ಮತ್ತು ಕನಿಷ್ಠ ಉಷ್ಣಾಂಶ 24.6°C.
ಮಂಗಳೂರು ಏರ್ಪೋರ್ಟ್: ಗರಿಷ್ಠ ಉಷ್ಣಾಂಶ 28.9°C ಮತ್ತು ಕನಿಷ್ಠ ಉಷ್ಣಾಂಶ 23.1°C.
ಶಕ್ತಿನಗರ: ಗರಿಷ್ಠ ಉಷ್ಣಾಂಶ 30.1°C ಮತ್ತು ಕನಿಷ್ಠ ಉಷ್ಣಾಂಶ 23.2°C.
ಬೆಳಗಾವಿ ಏರ್ಪೋರ್ಟ್: ಗರಿಷ್ಠ ಉಷ್ಣಾಂಶ 26.4°C ಮತ್ತು ಕನಿಷ್ಠ ಉಷ್ಣಾಂಶ 21.4°C.
ಬೀದರ್: ಗರಿಷ್ಠ ಉಷ್ಣಾಂಶ 31.0°C ಮತ್ತು ಕನಿಷ್ಠ ಉಷ್ಣಾಂಶ 22.4°C.
ವಿಜಯಪುರ: ಗರಿಷ್ಠ ಉಷ್ಣಾಂಶ 29.2°C ಮತ್ತು ಕನಿಷ್ಠ ಉಷ್ಣಾಂಶ 22.4°C.
ಧಾರವಾಡ: ಗರಿಷ್ಠ ಉಷ್ಣಾಂಶ 26.8°C.
ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ: 30,307 ಹೆಚ್ಚು ಹುದ್ದೆಗಳು ಖಾಲಿ! ಕೂಡಲೇ ಅಪ್ಲೈ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


