ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಕೆ ಮಾಡುತ್ತಿದ್ದ ವಿಡಿಯೊ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಿಸಿಬಿ ಪೊಲೀಸರು ಈ ಹಿಂದೆ ನಟ ಧನ್ವೀರ್ನನ್ನು ಕರೆದು ವಿಚಾರಣೆ ನಡೆಸಿದ್ದರು.
ಜೈಲಿನ ವಿಡಿಯೊಗಳನ್ನು ಧನ್ವೀರ್ ಹರಿಬಿಟ್ಟಿದ್ದಾರಾ ಎಂಬ ಅನುಮಾನದೊಂದಿಗೆ ಈ ವಿಚಾರಣೆಯನ್ನು ನಡೆಸಲಾಗಿತ್ತು. ಅಲ್ಲದೇ ಪರಪ್ಪನ ಅಗ್ರಹಾರ ಪೊಲೀಸರೂ ಸಹ ಪ್ರಕರಣವನ್ನು ದಾಖಲಿಸಿಕೊಂಡು ಧನ್ವೀರ್ ವಿಚಾರಣೆಯನ್ನು ನಡೆಸಿದ್ದರು.
ಸಿಸಿಬಿ ಹಾಗೂ ಪರಪ್ಪನ ಅಗ್ರಹಾರ ಪೊಲೀಸರು ಧನ್ವೀರ್ ಮೊಬೈಲ್ ಪಡೆದು ಪರಿಶೀಲನೆಯನ್ನು ಮಾಡಿದ್ದರು. ಆದರೆ ಇದೀಗ ಹೊಸ ಅನುಮಾನ ಶುರುವಾಗಿದ್ದು, ಧನ್ವೀರ್ ಸಿಸಿಬಿ ಪೊಲೀಸರಿಗೆ ಹಾಗೂ ಪರಪ್ಪನ ಅಗ್ರಹಾರ ಪೊಲೀಸರಿಗೆ ಕೊಟ್ಟ ಮೊಬೈಲ್ ಬೇರೆ ಬೇರೆ ಎನ್ನಲಾಗುತ್ತಿದೆ.
ಪೊಲೀಸರು ವಶಪಡಿಸಿಕೊಂಡ ಮೊಬೈಲ್ನಲ್ಲಿ ಯಾವುದೇ ವಿಡಿಯೊಗಳು ಇಲ್ಲವಾದ ಕಾರಣ ಹೊಸ ಮೊಬೈಲ್ನನ್ನೇದಾರೂ ಕೊಟ್ಟಿದ್ದಾರಾ ಎಂಬುದನ್ನು ಡೇಟಾ ರಿಟ್ರೀವ್ ಮಾಡಿಕೊಳ್ಳುವ ಮೂಲಕ ಪತ್ತೆಹಚ್ಚಲು ಮುಂದಾಗಿದ್ದಾರೆ.
ಒಂದು ವೇಳೆ ಧನ್ವೀರ್ ಬೇರೆ ಮೊಬೈಲ್ ನೀಡಿ ಅಥವಾ ವಿಡಿಯೊಗಳನ್ನು ಡಿಲಿಟ್ ಮಾಡಿ ಪೊಲೀಸರನ್ನು ಯಾಮಾರಿಸಲು ಯತ್ನಿಸಿದ್ದೇ ಆಗಿದ್ದಲ್ಲಿ ಸಾಕ್ಷ್ಯನಾಶ ಪ್ರಕರಣದಲ್ಲಿ ಬಂಧನಕ್ಕೊಳಗಾಗಲಿದ್ದಾರೆ.
ಚಿನ್ನ, ಬೆಳ್ಳಿ ಬೆಲೆ ಇಳಿಕೆ: ಕೊಳ್ಳಲು ಇದು ಸುವರ್ಣಾವಕಾಶ! ಇಲ್ಲಿದೆ ಇಂದಿನ ದರಪಟ್ಟಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


