ಉತ್ತರಾಖಂಡದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದ್ದ ಬಿಹಾರದ ಮೂವರು ಕಾರ್ಮಿಕರು ಅಂತ್ಯಕ್ರಿಯೆ ವೇಳೆ ಪ್ರತ್ಯಕ್ಷರಾದ ಘಟನೆ ನಡೆದಿದೆ!
ಧರಾಲಿ ಗ್ರಾಮದಲ್ಲಿ ದಿಢೀರ್ ಪ್ರವಾಹದ ವೇಳೆ ಹಲವರು ನಾಪತ್ತೆಯಾಗಿದ್ದರು. ಇದೇ ಸಮಯದಲ್ಲಿ ಉತ್ತರಕಾಶಿಗೆ ಕೆಲಸಕ್ಕೆಂದು ತೆರಳಿದ್ದ ಬಿಹಾರದ ಕಾರ್ಮಿಕರಾದ ರಾಹುಲ್ ಮುಖಿಯಾ, ಮುನ್ನಾ ಮುಖೀಯಾ ಮತ್ತು ರವಿ ಕುಮಾರ್ ಅವರೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಅವರು ಮೃತಪಟ್ಟಿದ್ದಾರೆಂದು ಭಾವಿಸಿ ಕುಟುಂಬಗಳು ಅವರ ಪ್ರತಿರೂಪಗಳನ್ನಿಟ್ಟು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದವು. ಇದೇ ವೇಳೆ ಇವರು ಪ್ರತ್ಯಕ್ಷರಾಗಿದ್ದು, ಕುಟುಂಬದವರ ಸಂತಸಪಟ್ಟಿದ್ದಾರೆ.
ಪ್ರವಾಹಕ್ಕೂ 3 ದಿನಗಳ ಮೊದಲೇ ಅವರು ಘಟನಾ ಸ್ಥಳದಿಂದ ಸುಮಾರು 6 ಕಿ.ಮೀ. ದೂರದ ಗಂಗೋತ್ರಿಗೆ ತೆರಳಿದ್ದರು. ಆದರೆ, ನೆಟ್ವರ್ಕ್ ಸಮಸ್ಯೆಗಳಿಂದಾಗಿ ಕುಟುಂಬದ ಸಂಪರ್ಕ ಸಾಧ್ಯವಾಗಿರಲಿಲ್ಲ. ಅಲ್ಲದೇ ಅವರಿಗೆ ಈ ಪ್ರವಾಹದ ಬಗ್ಗೆ ಮಾಹಿತಿಯೂ ಇರಲಿಲ್ಲ. ಕೊನೆಗೆ ನಾಪತ್ತೆಯಾದವರ ಪಟ್ಟಿಯಲ್ಲಿದ್ದವರನ್ನು ಸೇನೆ ಶೋಧಿಸುತ್ತಿರುವಾಗ ಇವರನ್ನು ಪತ್ತೆ ಹಚ್ಚಲಾಗಿದೆ. ಬಳಿಕ ಇವರು ಸೇನೆಯ ಸಹಾಯದಿಂದ ಡೆಹ್ರಾಡೂನ್ಗೆ ವಿಮಾನದಲ್ಲಿ ತೆರಳಿ, ಅಂತಿಮವಾಗಿ ತಮ್ಮ ಹಳ್ಳಿಗೆ ಮರಳಿದ್ದಾರೆ.
,ವಿಷ್ಣು ಸಮಾಧಿ ನೆಲಸಮ: ಯಶ್ ಹೆಸರು ಯಾಕೆ ತರ್ತೀರಾ ಎಂದು ಅನಿರುದ್ಧ್ ಎದುರೇ ಫ್ಯಾನ್ಸ್ ಗರಂ; ವಿಡಿಯೊ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


