ಮಂಗಳವಾರ ಜಮ್ಮು ಕಾಶ್ಮೀರದ ಬೈಸರನ್ ವ್ಯಾಲಿಯ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಭಾರತ ಹಾಗೂ ಪಾಕ್ ನಡುವೆ ತಿಕ್ಕಾಟ ಏರ್ಪಟ್ಟಿದೆ.
ಈ ಘಟನೆಯ ಬೆನ್ನಲ್ಲೇ ಇದೀಗ ಲಷ್ಕರ್ ಎ ತೊಬ್ದಾದ ಟಾಪ್ ಕಮ್ಯಾಂಡರ್ ಅಲ್ತಾಫ್ ಲಲ್ಲಿಯನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಇನ್ನು ಪಹಲ್ಗಾಮ್ ದಾಳಿಯ ಹೊಣೆಯನ್ನುಲಷ್ಕರ್ ಎ ತೊಯ್ಬಾ ಹೊತ್ತುಕೊಂಡಿತ್ತು.
ಇಂದು ( ಏಪ್ರಿಲ್ 25 ) ಬೆಳ್ಳಂಬೆಳಗ್ಗೆಯೇ ಬಂಡಿಪೊರಾದಲ್ಲಿ ಕಾಣಿಸಿಕೊಂಡಿದ್ದ ಭಾರತೀಯ ಸೇನೆ ಕಾರ್ಯಾಚರಣೆಯ ಸೂಚನೆಯನ್ನು ನೀಡಿತ್ತು. ಅದಕ್ಕೆ ತಕ್ಕಂತೆ ಇದೀಗ ಎಲ್ಇಟಿ ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿ ಸಾವನ್ನಪ್ಪಿದ್ದು, ಭಾರತ ಸೇನೆ ಪಹಲ್ಗಾಮ್ ದಾಳಿಯ ಪ್ರತಿಕಾರದ ಬೇಟೆಯನ್ನು ಆರಂಭಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


