ತನ್ನ ರಮಣೀಯ ವಾತಾವರಣ ಹಾಗೂ ಪ್ರವಾಸ ಪ್ರಿಯರ ಮೆಚ್ಚುಗೆಯ ಸ್ಥಳಗಳ ಮೂಲಕ ಹಿಮಾಲಯ ಭಾಗದ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಲಡಾಖ್ ನಿನ್ನೆ ( ಸೆಪ್ಟೆಂಬರ್ 24 ) ದೊಡ್ಡ ಮಟ್ಟದ ಹಿಂಸಾಚಾರದ ತಾಣವಾಗಿತ್ತು.
ಜೆನ್ ಝಿಗಳು ಇದ್ದಕ್ಕಿದ್ದಂತೆ ಬಿಜೆಪಿ ಕಚೇರಿಗೆ ಬೆಂಕಿ ಇಟ್ಟು ಬಾವುಟ ಕಿತ್ತೆಸೆದಿದ್ದರು. ಲಡಾಖ್ ಪ್ರಾಂತ್ಯದ ಯುವ ಜನತೆ ಈ ಮಟ್ಟಕ್ಕೆ ರೊಚ್ಚಿಗೆದ್ದು ವರ್ತಿಸಲು ಕಾರಣ ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡುವ ಕುರಿತ ವಿಚಾರವಾಗಿ.
ಹೌದು, ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡಬೇಕು ಹಾಗೂ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಲೇಹ್ನಲ್ಲಿ ಆರಂಭಗೊಂಡ ಶಾಂತಿಯುತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದೆ. ಈ ಗಲಭೆಯಲ್ಲಿ 4 ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೇಪಾಳದ ಬಳಿಕ ಲಡಾಖ್ನಲ್ಲಿ ಯುವ ಜನತೆ ತಮ್ಮ ಅಸ್ತಿತ್ವಕ್ಕಾಗಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಇದನ್ನು ಟೀಕಿಸಿದ್ದಾರೆ.
ಇನ್ನು ಈ ಪ್ರತಿಭಟನೆ ಸುಮಾರು ದಶಕದ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದು, ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಇಂದು ಯುವ ಜನತೆ ಬಿಜೆಪಿ ಕಚೇರಿಗೆ ನುಗ್ಗಿದ್ದಾರೆ ಎನ್ನಲಾಗಿದೆ.
WhatsApp ಗುಡ್ ನ್ಯೂಸ್: ಇನ್ಮುಂದೆ ಬೇರೆ ಭಾಷೆಯ ಸಂದೇಶಗಳಿಗೂ ಚಾಟ್ನಲ್ಲಿಯೇ ಅನುವಾದ ಲಭ್ಯ!
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


