Sunday, September 20, 2026
spot_img
More
    spot_img
    HomeLatest news‌Fact Check: ಬೈಕ್‌ ಟ್ಯಾಕ್ಸಿ ಪರ ನಿಂತ ಲಾಯರ್‌ ಜಗದೀಶ್‌ ಮುಖ ಕಿತ್ತುಹೋಗುವ ಹಾಗೆ ಹೊಡೆದ...

    ‌Fact Check: ಬೈಕ್‌ ಟ್ಯಾಕ್ಸಿ ಪರ ನಿಂತ ಲಾಯರ್‌ ಜಗದೀಶ್‌ ಮುಖ ಕಿತ್ತುಹೋಗುವ ಹಾಗೆ ಹೊಡೆದ ಆಟೊ ಡ್ರೈವರ್ಸ್!

    ರಾಜ್ಯಾದ್ಯಂತ ಬೈಕ್‌ ಟ್ಯಾಕ್ಸಿಯನ್ನು ರದ್ದುಗೊಳಿಸಿ ನ್ಯಾಯಾಲಯ ತೀರ್ಪುಗೊಳಿಸಿದ್ದು, ಈ ನಿರ್ಣಯಕ್ಕೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗ್ಗದ ಖರ್ಚಿನಲ್ಲಿ ಬೈಕ್‌ ಟ್ಯಾಕ್ಸಿ ಮೂಲಕ ಪ್ರಯಾಣ ಮಾಡುತ್ತಿದ್ದ ಮಂದಿ ಈ ನಡೆಯನ್ನು ಖಂಡಿಸಿದ್ದಾರೆ.

    Advertisement

    ಕಡಿಮೆ ಗಳಿಸುವ ಅದೆಷ್ಟೋ ಜನರಿಗೆ ಅನುಕೂಲ ಒದಗಿಸಿದ್ದ ಬೈಕ್‌ ಟ್ಯಾಕ್ಸಿ ರದ್ದು ಮಾಡಿದ್ದನ್ನು ರೀಲ್ಸ್‌ ಮೂಲಕವೂ ಸಹ ಅನೇಕ ಮಂದಿ ವಿರೋಧಿಸಿದ್ದರು. ಇನ್ನು ಲಾಯರ್‌ ಜಗದೀಶ್‌ ಬೈಕ್‌ ಟ್ಯಾಕ್ಸಿ ಪರ ಹೋರಾಟ ಮಾಡಿ ಮತ್ತೆ ಜಾರಿಗೆ ಬರುವಂತೆ ಮಾಡುವುದಾಗಿ ವಿಡಿಯೊ ಮಾಡಿ ಹಂಚಿಕೊಂಡಿದ್ದರು.

    ಇದರ ವಿರುದ್ಧ ಸಾಮಾನ್ಯವಾಗಿ ಆಟೊ ಚಾಲಕರು ಕಾಮೆಂಟ್‌ ಮಾಡಿದ್ದರು. ಇನ್ನು ಇದಕ್ಕೆ ಸಂಬಂಧಿಸಿದಂತೆ ಲಾಯರ್‌ ಜಗದೀಶ್‌ ಅವರ ಮೇಲೆ ಆಟೊ ಚಾಲಕರು ಹಲ್ಲೆ ನಡೆಸಿದ್ದಾರೆ ಎಂಬ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ ಲಾಯರ್‌ ಜಗದೀಶ್‌ ಅವರ ಮುಖ ಕಿತ್ತುಹಾಗುವ ಹಾಗೆ ಹೊಡೆದಿದ್ದಾರೆ ಎಂಬ ಮಾತುಗಳನ್ನು ಸಾರ್ವಜನಿಕರು ಹೇಳುತ್ತಿರುವ ಆಡಿಯೊ ಸಹ ಇದೆ.

    ಈ ವಿಡಿಯೊವನ್ನು ಕರ್ನಾಟಕ ಸ್ಟೋರಿಸ್‌ ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಆಟೊ ಚಾಲಕರ ವಿರುದ್ಧ ನೀಡಿದ ಹೇಳಿಕೆಗೆ ಲಾಯರ್‌ ಜಗದೀಶ್‌ ಜೊತೆ ಆಟೊ ಚಾಲಕರು ಫೈಟ್‌ ಎಂದು ಬರೆದುಕೊಂಡಿದ್ದಾರೆ. ಆದರೆ ಅಸಲಿಯತ್ತಿಗೆ ಇದು ಜನವರಿ ತಿಂಗಳಿನ ವಿಡಿಯೊ. ಜಗದೀಶ್‌ ತಮ್ಮ ಕಾಂಪ್ಲೆಕ್ಸ್‌ ಮುಂದೆ ರಸ್ತೆ ಬ್ಲಾಕ್‌ ಮಾಡಿಕೊಂಡು ಅಣ್ಣಮ್ಮ ಕೂರಿಸಿದ್ದರ ಕುರಿತಾಗಿ ಪ್ರಶ್ನಿಸಿದ್ದಕ್ಕೆ ಸ್ಥಳೀಯರ ಜೊತೆ ನಡೆದಿದ್ದ ಜಗಳವಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಜಗದೀಶ್‌ ನಡುವೆ ಈ ಮಾರಾಮಾರಿ ನಡೆದಿತ್ತು.

    ಅಸಲಿ ಸುದ್ದಿ: ʼಜಗದೀಶ್‌ ಸರ್‌ದು ಮುಖ ಮೂತಿ ಎಲ್ಲಾ ಕಿತ್ತೋಗಿದೆ ಪಾಪʼ: ಮೂಗಿನಲ್ಲಿ ರಕ್ತ ಸುರಿಯುವ ಮಟ್ಟಕ್ಕೆ ಹಲ್ಲೆ ಮಾಡಿದ ಪುಂಡರು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading