ಅತಿಯಾದರೆ ಅಮೃತವೂ ಸಹ ವಿಷ ಎನ್ನುವ ಮಾತಿದೆ. ಅದರಂತೆ ಯಾವುದೇ ವಿಷಯದ ಮೇಲಿನ ಪ್ರೀತಿ ಅತಿಯಾದರೆ ಅದೂ ಸಹ ಒಳ್ಳೆಯದಲ್ಲ. ಅದಕ್ಕೆ ತಾಜಾ ಉದಾಹರಣೆ ಭಾಷೆ ವಿಷಯವಾಗಿ ನಡೆದ ಜಗಳ ಕೊನೆಯಲ್ಲಿ ಆತ್ಮಹತ್ಯೆಯಲ್ಲಿ ಕೊನೆಯಾಗಿರುವುದು.
ಹೌದು, ಮಹಾರಾಷ್ಟ್ರದ ಥಾಣೆಯಲ್ಲಿ ಸ್ಥಳೀಯರು 19 ವರ್ಷದ ವಿದ್ಯಾರ್ಥಿಯೋರ್ವ ಮರಾಠಿ ಮಾತನಾಡದೇ ಹಿಂದಿ ಮಾತನಾಡಿದ್ದಕ್ಕೆ ಹಲ್ಲೆ ನಡೆಸಿದ್ದು, ಇದರಿಂದ ಮನನೊಂದ ವಿದ್ಯಾರ್ಥಿ ತನ್ನ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆಗೆ ಶರಣನಾಗಿದ್ದಾನೆ.
ಆರ್ನವ್ ಲಕ್ಷ್ಮಣ್ ಖೈರೆ ಎಂಬ ಮೊದಲ ವರ್ಷದ ವಿಜ್ಞಾನ ಪದವಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಇನ್ನು ಕಲ್ಯಾಣ್ನಿಂದ ಥಾಣೆಯಲ್ಲಿರುವ ತನ್ನ ಕಾಲೇಜಿಗೆ ಸ್ಥಳೀಯ ರೈಲು ಬಳಸಿ ಪ್ರಯಾಣ ಮಾಡುತ್ತಿದ್ದ ಆರ್ನವ್ಗೆ ಸ್ಥಳೀಯರೊಬ್ಬರು ರಶ್ ಇದ್ದ ಕಾರಣ ತುಸು ಪಕ್ಕಕ್ಕೆ ಸರಿಯುವಂತೆ ಹೇಳಿದ್ದಾರೆ. ಈ ವೇಳೆ ಆತ ಹಿಂದಿಯಲ್ಲಿ ಮಾತನಾಡಿದ ಕಾರಣ ಸ್ಥಳೀಯರು ಮರಾಠಿ ಬರುವುದಿಲ್ಲವೇ ಎಂದು ಪ್ರಶ್ನಿಸಿ ಬಳಿಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನು ಸ್ವತಃ ಆರ್ನವ್ ತನಗೆ ಕರೆ ಮಾಡಿದಾಗ ಹೇಳಿಕೊಂಡ ಎಂದು ಮೃತನ ತಂದೆ ತಿಳಿಸಿದ್ದಾರೆ.
ಘಟನೆ ಬಗ್ಗೆ ಕರೆ ಮಾಡಿ ದುಃಖದಿಂದ ಹೇಳಿಕೊಂಡ ಆರ್ನವ್ ಆತನ ತಂದೆ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ಲಾಕ್ ಮಾಡಿಕೊಂಡಿದ್ದ. ಸ್ಥಳೀಯರ ಸಹಾಯ ಪಡೆದು ಬಾಗಿಲು ತೆರೆದ ತಂದೆಗೆ ಆತ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
Disclaimer: ಯಾವುದೇ ಸಮಸ್ಯೆಗೂ ಸಾವೊಂದೇ ಪರಿಹಾರವಲ್ಲ. ಆತ್ಮಹತ್ಯೆಯ ಯೋಚನೆ ಬಂದರೆ ನಿಮ್ಮ ನೆಚ್ಚಿನ ವ್ಯಕ್ತಿ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಿ. ಇಲ್ಲವೇ ಈ ಸಹಾಯವಾಣಿಗೆ ಕರೆಮಾಡಿ: 9152987821
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


